Advertisement

ಹಿಂದೂ ಸಂಘಟನೆಯಿಂದ  ಮಾಂಸ ಮಾರಾಟ : ಸವಾಲೊಡ್ಡಿದ ಪ್ರಗತಿಪರ ಚಿಂತಕರು

10:49 PM Apr 03, 2022 | Team Udayavani |

ಚಿಕ್ಕಮಗಳೂರು : ಹಲಾಲ್‌ ಮತ್ತು ಜಟ್ಕಾ ಕಟ್‌ ವಿವಾದ ತೀವ್ರವಾಗುತ್ತಿದ್ದು, ಯುಗಾದಿ ಹಬ್ಬದ ಮರುದಿನ ಹೊಸತೊಡಕಿಗೆ  ಹಿಂದೂ ಸಂಘ ಟನೆಗಳ ಮುಖಂಡರು ಜಟ್ಕಾ ಕಟ್‌ ಮಾಂಸ ಮಾರಾಟಕ್ಕೆ ಮುಂದಾದರು.

Advertisement

ಬಜರಂಗಳದ ಜಿಲ್ಲಾ ಸಂಚಾಲಕ ಶ್ಯಾಮ್‌ ವಿ. ಗೌಡ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ಜನರಿಗೆ ಕುರಿ ಮಾಂಸವನ್ನು ಮಾರಾಟ ಮಾಡಲಾಯಿತು. ಚನ್ನರಾಯ ಪಟ್ಟಣದಿಂದ  ಕುರಿಗಳನ್ನು ರೈತರಿಂದ ಖರೀದಿಸಿದ್ದು ಅವುಗಳನ್ನು ಜಟ್ಕಾಕಟ್‌ ಮೂಲಕ ವಧಿಸಿ ಸ್ಥಳದಲ್ಲೇ 600 ರೂ.ಗೆ ಮಾಂಸ ಮಾರಾಟ ಮಾಡಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾಂಸವನ್ನು ನೀಡಲಾಗಿದ್ದು ಹೋಮ್‌ ಡೆಲಿವರಿಯ ಸೌಲಭ್ಯವನ್ನೂ ನೀಡಲಾಗಿದೆ ಎಂದು ನಾಯಕರು ತಿಳಿಸಿದ್ದಾರೆ.

ಸವಾಲೊಡ್ಡಿದ ಪ್ರಗತಿಪರ ಚಿಂತಕರು

ಮೈಸೂರು : ಹಿಂದೂ ಸಂಘಟನೆಗಳ ಕರೆಗೆ ಸವಾಲೊಡ್ಡಿದ ಕೆಲವು  ಪ್ರಗತಿಪರ ಚಿಂತಕರು ಮುಸ್ಲಿಮರ ಅಂಗಡಿಯಿಂದಲೇ ಹಲಾಲ್‌ ಕಟ್‌ ಮಾಂಸವನ್ನು ಖರೀದಿಸಿದರು. ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ವತಿಯಿಂದ ಸಾಹಿತಿ ದೇವನೂರ ಮಹದೇವ  ನೇತೃತ್ವದಲ್ಲಿ  ಚಿಂತಕರಾದ ಪ.ಮಲ್ಲೇಶ್‌, ರೈತ ಸಂಘದ ಬಡಗಲಪರ ನಾಗೇಂದ್ರ, ಚೋರನಹಳ್ಳಿ ಶಿವಣ್ಣ, ಬಿಎಸ್‌ಪಿ ಮುಖಂಡ ಚನ್ನಕೇಶವ ಮತ್ತಿತರರು ಇಲ್ಲಿನ ಶಾಂತಿನಗರದಲ್ಲಿರುವ ಮಟನ್‌ ಶಾಪೊಂದಕ್ಕೆ ತೆರಳಿ ಮುಸ್ಲಿಮರಿಂದಲೇ ಮಾಂಸ ಖರೀದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವನೂರು ಮಹದೇವ ಅವರು ವೋಟು ಬ್ಯಾಂಕ್‌ ರಾಜಕಾರಣಕ್ಕಾಗಿ ಹಿಂದೂ ಪರ ಸಂಘಟನೆಗಳ ಕುತಂತ್ರಕ್ಕೆ ಸರಕಾರವೇ ಸಾಥ್‌ ನೀಡುತ್ತಿದೆ ಎಂದು ಆರೋಪಿಸಿದರು.

Advertisement

ಈ ಮಧ್ಯೆ ಮೈಸೂರಿನ ಅನೇಕ ಕಡೆ ಹಿಂದೂಗಳು ರವಿವಾರ ತಮ್ಮವರ ಅಂಗಡಿಗಳಿಂದಲೇ ಮಾಂಸ ಖರೀದಿಸುತ್ತಿದುದು ಕಂಡು ಬಂತು.

ಹಲಾಲ್‌ ಮಾಡುವ ಮರಿಗಳನ್ನು ನಾವು  ಎಷ್ಟೋ ವರ್ಷಗಳಿಂದ ಸೇವನೆ ಮಾಡುತ್ತಿದ್ದರೂ ಈಗ ಅನಗತ್ಯವಾಗಿ ಸಂಬಂಧ ಇಲ್ಲದ ವಿಷಯಗಳನ್ನು ಎತ್ತಿಕೊಂಡು ಶಾಂತಿ ಕದಡುವುದು ಎಷ್ಟು ಸರಿ? ಹಲಾಲ್‌ ಅವರ (ಅಲ್ಪಸಂಖ್ಯಾಕರ) ಪದ್ಧತಿ. ಅದು ಅವರವರ ನಂಬಿಕೆಗಳಾಗಿವೆ. ನಾವೂ ಹಬ್ಬ-ಹರಿದಿನಗಳಲ್ಲಿ ಮರಿ ಕೊಯ್ಯುವುದಿಲ್ಲವೇ? ರಕ್ತ ಕೆಳಗೆ ಚೆಲ್ಲುವುದಿಲ್ಲವೇ?   ಈಗ ಏಕಾಏಕಿ ಯಾಕೆ ವಿವಾದ ಸೃಷ್ಟಿಸಲಾಗಿದೆ?

-ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next