Advertisement

ಬಾಲಕಿಯ ಕಣ್ಣು ದಾನ ಮಾಡಿದರೂ ಪಡೆಯಲು ಹಿಂದೇಟು, ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

03:13 PM Oct 30, 2022 | Team Udayavani |

ಚಿಕ್ಕಮಗಳೂರು : ಹೃದಯಾಘಾತದಿಂದ ಮೂಡಿಗೆರೆ ಪಟ್ಟಣದ ಒಂಬತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಸಾವನ್ನಪ್ಪಿದ್ದು, ಪೋಷಕರು ಮಗಳ ಕಣ್ಣುಗಳನ್ನು ದಾನಮಾಡಲು ಮುಂದಾದರೂ ಪಡೆಯಲು ಹಿಂದೇಟು ಹಾಕಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

Advertisement

ಮೂಡಿಗೆರೆಯ ವೈಷ್ಣವಿ ಹೃದಯಾಘಾತದಿಂದ ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದಾಳೆ, ಈ ವೇಳೆ ಆಕೆಯ ಪೋಷಕರು ಮಗಳ ಕಣ್ಣುಗಳನ್ನು ದಾನಮಾಡಲು ನಿರ್ಧರಿಸಿದ್ದಾರೆ, ಆದರೆ ತಡರಾತ್ರಿಯಾದರೂ ಕಣ್ಣು ದಾನ ಪಡೆಯಲು ಬಾರದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆಕ್ರೋಶದ ಬಳಿಕ ಅಧಿಕಾರಿಗಳ ತಂಡ ಆಗಮಿಸಿ ಕಣ್ಣುಗಳನ್ನು ದಾನ ಪಡೆಯುವ ಪ್ರಕ್ರಿಯೇಯನ್ನು ಮುಗಿಸಿದ್ದಾರೆ.

ಇದನ್ನೂ ಓದಿ : ಜನ್ಮಜಾತ ಹೈಪೊಥೈರಾಯ್ಡಿಸಂ; ಮೇಲುಗೈ ಸಾಧಿಸಬಾರದ ಬಾಲ್ಯಕಾಲದ ಕಾಯಿಲೆ

Advertisement

Udayavani is now on Telegram. Click here to join our channel and stay updated with the latest news.

Next