Advertisement

Chikkamagaluru: ವಕೀಲರು – ಪೊಲೀಸ್‌ ಸಂಘರ್ಷ- ನ್ಯಾಯವಾದಿ ಪ್ರೀತಮ್‌ ಹೇಳಿಕೆ ದಾಖಲು

10:19 PM Dec 07, 2023 | Team Udayavani |

ಚಿಕ್ಕಮಗಳೂರು: ರಾಜ್ಯಾದ್ಯಂತ ಭಾರೀ ಸುದ್ದಿಯಲ್ಲಿರುವ ವಕೀಲರು ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣದ ತನಿಖೆಯು ಸಿಐಡಿ ಡಿಐಜಿಪಿ ವಂಶಿಕೃಷ್ಣ ನೇತೃತ್ವದಲ್ಲಿ ಪ್ರಾರಂಭವಾಗಿದ್ದು, ಹಲ್ಲೆಗೊಳಗಾದ ಯುವ ವಕೀಲ ಪ್ರೀತಮ್‌ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

Advertisement

ಸಿಐಡಿ ಪೊಲೀಸ್‌ ವರಿಷ್ಠಾಧಿಕಾರಿ ವೆಂಕಟೇಶ್‌, ಡಿವೈಎಸ್‌ಪಿ ಉಮೇಶ್‌ ಹಾಗೂ ಕಾನೂನು ಸಲಹೆಗಾರ ಕಾಳೆ ಅವರು ಬುಧವಾರ ನಗರಕ್ಕೆ ಆಗಮಿಸಿದ್ದರು. ಗುರುವಾರ ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರು ನಗರದ ಪ್ರವಾಸಿ ಮಂದಿರದಲ್ಲಿ ಪ್ರೀತಮ್‌ ಹೇಳಿಕೆಯನ್ನು ದಾಖಲಿಸಿಕೊಂಡರು.

ನಗರದ ಮಾರ್ಕೆಟ್‌ ರಸ್ತೆಯಲ್ಲಿ ತಾನು ಬೈಕ್‌ನಲ್ಲಿ ತೆರಳುತ್ತಿದ್ದಾಗ ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ನಗರ ಪೊಲೀಸ್‌ ಠಾಣೆಯ ಸಿಬಂದಿ ತನ್ನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು ಎಂದು ಪ್ರೀತಮ್‌ ದೂರಿನಲ್ಲಿ ತಿಳಿಸಿದ್ದು, ಅಂದು ನಡೆದ ಘಟನೆಯ ಸಮಗ್ರ ಮಾಹಿತಿಯನ್ನು ಅವರು ವಂಶಿಕೃಷ್ಣ ಅವರಿಗೆ ತಿಳಿಸಿದರು. ತನಿಖೆಯ ಮುಂದಿನ ಭಾಗವಾಗಿ, ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿರುವ ಆರು ಮಂದಿ ಪೊಲೀಸ್‌ ಸಿಬಂದಿಯನ್ನು ಶುಕ್ರವಾರ ವಿಚಾರಣೆ ನಡೆಸಿ, ಅವರ ಹೇಳಿಕೆ ಪಡೆಯಲಾಗುವುದು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next