Advertisement

Chikkamagaluru: ಪ್ರವಾಸಿಗರ ಕಾರಿಗೆ ಡಿಕ್ಕಿ ಹೊಡೆದು ದರ್ಪ ಮೆರೆಯುತ್ತಿರುವ ಜೀಪ್‌ ಚಾಲಕರು

11:48 AM Jul 14, 2024 | Team Udayavani |

ಚಿಕ್ಕಮಗಳೂರು: ಪೊಲೀಸರ ಖಡಕ್ ಎಚ್ಚರಿಕೆ ನಡುವೆಯೂ ಸ್ಥಳೀಯ ಜೀಪು ಚಾಲಕರ ಪುಂಡಾಟ ನಿಲ್ಲದಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

Advertisement

ಪ್ರವಾಸಿಗರ ಮೇಲೆ ಸ್ಥಳೀಯ ಬಾಡಿಗೆ ಜೀಪ್ ಚಾಲಕರು ದರ್ಪ ತೋರಿಸುತ್ತಿದ್ದು, ಕುಡಿದು ವಾಹನ ಚಲಾಯಿಸಿ ಗಿರಿಯಲ್ಲಿ ಅಪಘಾತ ಕೂಡಾ ಮಾಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬಂದ ಪ್ರವಾಸಿಗರ ಕಾರಿಗೆ ಸ್ಥಳೀಯ ಜೀಪ್‌ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

Advertisement

ಅಪಘಾತದ ರಭಸಕ್ಕೆ ಪ್ರವಾಸಿಗರ ಕಾರಿನ ಮುಂಭಾಗ ಜಖಂಗೊಂಡಿದ್ದು, ಈ ಬಗ್ಗೆ ಪ್ರವಾಸಿಗರು ಪ್ರಶ್ನಿಸಿದ್ದಕ್ಕೆ ಅಶ್ಲೀಲ, ಅವಾಚ್ಯ ಶಬ್ದಗಳಿಂದ ಕೆಲ ಜೀಪು ಚಾಲಕರು ನಿಂದಿಸಿದ್ದು ಮಾತ್ರವಲ್ಲದೇ ನಾವು ಲೋಕಲ್.. ಏನು ಮಾಡೋದಕ್ಕೂ ಆಗೋಲ್ಲ ನಿಮಗೆ.. ಹೋಗು ಎಂದು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಇಂತಹ ಘಟನೆಗಳಿಂದ ಸ್ಥಳೀಯ ಜೀಪು ಚಾಲಕರ ವರ್ತನೆಗೆ ಪ್ರವಾಸಿಗರು ಬೇಸರಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next