Advertisement

Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ

04:14 PM Apr 22, 2024 | Team Udayavani |

ಚಿಕ್ಕಮಗಳೂರು: ಎಚ್ ಡಿ ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು. ದೇವೇಗೌಡರನ್ನು ಏನಾದರೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದರಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು ಅವರು. ಆಗ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನಾನು-ದೇವೇಗೌಡ ಎಲ್ಲ ಒಟ್ಟಿಗೆ ಇದ್ದೆವಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ತರೀಕೆರೆಯಲ್ಲಿ ಮಾತನಾಡಿದ ಅವರು, ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಬೇಕು ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಪ್ರಕ್ಷುಬ್ಧತೆ ಮಾಡಿದವರು ಯಾರು? ಬಿಜೆಪಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ, ನಾವು ಅದಕ್ಕೆ ಭಾರತ್ ಜೋಡೋ ಯಾತ್ರೆ ಮಾಡಿದ್ದು ಎಂದರು.

ಕಾವೇರಿಗೆ ದೇವೇಗೌಡ, ಕುಮಾರಸ್ವಾಮಿ ಅವರ ಪಾತ್ರ ಏನು? ಅವರು ಏನಾದರೂ ಮಾಡಿದ್ದೇವೆ ಎಂದು ಹೇಳಿದ್ದಾರಾ? ಪ್ರಧಾನ ಮಂತ್ರಿ ಕೆಲಸವೇ ದೇಶ ಕಾಯುವುದು, ದೇಶಕ್ಕೆ ರಕ್ಷಣೆ ಕೊಡುವುದು. ಇಂದಿರಾಗಾಂಧಿ, ನೆಹರೂ, ರಾಜೀವ್ ಗಾಂಧಿ, ನರಸಿಂಹರಾವ್ ಮಾಡಲಿಲ್ವಾ. ಇವರು ಮಾತ್ರ ಕಾಯುತ್ತಿದ್ದಾರಾ ಎಂದು  ಕೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಚಿಪ್ಪು ಜಾಹೀರಾರು ಕೊಡುತ್ತೇವೆಂದ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಾವು ಕೊಟ್ಟ ಮೇಲೆ ಅವರು ಯೋಚನೆ ಮಾಡುವುದು ಬೇರೆ. ಹೆಣ್ಣು ಮಕ್ಕಳಿಗೆ 2000 ಹಣ ಕೊಟ್ಟೆವು, ಅದು ಚಿಪ್ಪಾ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ಸಿನಲ್ಲಿ ಓಡಾಡ್ತಿದ್ದಾರೆ. ಅನ್ನಭಾಗ್ಯ 5 ಕೆ.ಜಿ.ಜಾಸ್ತಿ ಮಾಡಿದ್ದು ಚಿಪ್ಪಾ? ಎಲ್ಲರಿಗೂ ಫ್ರೀಯಾಗಿ ಕರೆಂಟ್ ಕೊಡುವುದು ಚಿಪ್ಪಾ? ಯುವನಿಧಿ, ತಿಂಗಳಿಗೆ 4-5 ಸಾವಿರ ಕುಟುಂಬಕ್ಕೆ ಕೊಡುವುದು ಚಿಪ್ಪಾ? ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next