Advertisement

Chikkamagaluru: ಮೊದಲ ದಿನವೇ ಅಸಮಾಧಾನ ಸ್ಪೋಟ ಎದುರಿಸಿದ ಕೈ ಅಭ್ಯರ್ಥಿ

06:29 PM Mar 26, 2024 | Team Udayavani |

ಚಿಕ್ಕಮಗಳೂರು: ಮೊದಲ ದಿನವೇ ಕೈ ಅಭ್ಯರ್ಥಿ ಅಸಮಾಧಾನ ಸ್ಟೋಟ ಎದುರಿಸಿದ ಘಟನೆ ನಡೆದಿದೆ.

Advertisement

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕದನ ಹಿನ್ನೆಲೆ ಕೈ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಇಂದಿನಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಪ್ರಚಾರ ಆರಂಭಿಸಿದರು.

ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಕಂಡಿದ್ದು, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಮುನಿಸು ವ್ಯಕ್ತಪಡಿಸಿದ್ದಾರೆ.

ನಗರದ ಆದ್ರಿಕಾ ಹೊಟೇಲ್ ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಎಂ.ಎಲ್.ಸಿ ಗಾಯತ್ರಿ ಶಾಂತೇಗೌಡ ವೇದಿಕೆ ಬಿಟ್ಟು ಕಾರ್ಯಕರ್ತರೊಂದಿಗೆ ಕುಳಿತಿದ್ದರು. ಸಚಿವ ಕೆ.ಜೆ. ಜಾರ್ಜ್, ಶಾಸಕ ಹೆಚ್‍.ಡಿ.ತಮ್ಮಯ್ಯ ಕರೆದರೂ ಮಾಜಿ ಎಂ.ಎಲ್.ಸಿ. ವೇದಿಕೆಗೆ ಬರಲಿಲ್ಲ.

Advertisement

ಚಿಕ್ಕಮಗಳೂರು ನಗರದಲ್ಲಿ ಇಂದು ನಡೆದ ಕೈ ಕಾರ್ಯಕರ್ತರ ಸಭೆಯಲ್ಲಿ ನಿರ್ಲಕ್ಷದ ಆರೋಪ ವ್ಯಕ್ತವಾಯಿತು. ಕೊನೆಗೆ ವೇದಿಕೆ ಬಿಟ್ಟು ಸಚಿವ ಜಾರ್ಜ್ ತೆರಳಿ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡರನ್ನು ಕರೆ ತಂದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next