Advertisement

ಚಿಕ್ಕಮಗಳೂರು ಕ್ಷೇತ್ರ: ಅಮೃತ್‌ ಶೆಣೈ ಅವರಿಂದ ಮತ ಯಾಚನೆ

11:00 PM Apr 12, 2019 | Sriram |

ಉಡುಪಿ: ಕೊಪ್ಪ, ಶೃಂಗೇರಿ, ಹರಿಹರಪುರ, ಜಯಪುರ ಮೊದಲಾದ ಸ್ಥಳಗಳಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಪಿ. ಅವರು ಬಿರುಸಿನ ಪ್ರಚಾರ ಕೈಗೊಂಡು ಮತ ಯಾಚಿಸಿದರು.

Advertisement

ಸಭೆಯನ್ನು ಉದ್ದೇಶಿಸಿ ಅಮೃತ್‌ ಶೆಣೈ ಮಾತನಾಡಿ, ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ಜತೆಜತೆಯಾಗಿ ಮಾಡುತ್ತೇನೆ. ಶೋಭಾ ಕರಂದ್ಲಾಜೆ ಮತ್ತು ಪ್ರಮೋದ್‌ ಮಧ್ವರಾಜ್‌ ಅವರ ಬಗ್ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ ಎಂದರು.

ಅವರಿಬ್ಬರಿಗೂ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ದೇವರು ಈಗಾಗಲೇ ಕೊಟ್ಟಿದ್ದಾರೆ. ಅದೇ ರೀತಿ ತನಗೂ ಒಂದು ಅವಕಾಶ ನೀಡಿದರೆ ಮತದಾರರು ಇಟ್ಟ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಕೆಲಸ ಮಾಡುತ್ತೇನೆ. ಅಲ್ಲದೆ ಕ್ಷೇತ್ರದ ಜನರ ಒಳಿತಿಗಾಗಿ ಚಿಕ್ಕಮಗಳೂರಿನಲ್ಲಿ ಮನೆ ಮಾಡಿ ಯಾವುದೇ ಹೊತ್ತಿನಲ್ಲೂ ಸಾರ್ವಜನಿಕರಿಗೆ ಸುಲಭವಾಗಿ ಭೇಟಿಯಾಗಲು ಸಿಗುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಕಳ ಕ್ಷೇತ್ರದ ಫ್ರಾನ್ಸಿಸ್‌, ಚಿಕ್ಕಮಗಳೂರು ಕ್ಷೇತ್ರದ ಹನೀಫ್, ತರಿಕೆರೆಯ ವರದರಾಜ್‌, ಕಾಪುವಿನ ಅಮೀರ್‌, ಜಯಶ್ರೀ ಭಟ್‌, ದಿನೇಶ್‌ ಮತ್ತಿತರರು ಶೆಣೈಯವರ ಪರ ಮಾತ ಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next