Advertisement

ಸ್ಫೋಟ ಪ್ರಕರಣ ಗಂಭೀರತೆ ಅರಿಯಲಿ

06:12 PM Jan 25, 2021 | Team Udayavani |

ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆ ಹುಣಸೋಡು ಕಲ್ಲುಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣ ಅಪಾಯಕಾರಿ ಬೆಳವಣಿಗೆ. ಇಂದು ಕಲ್ಲುಕ್ವಾರಿ, ನಾಳೆ ಭಯೋತ್ಪಾದಕರ ಕೈಗೆ ಸ್ಪೋಟಕ ಸಿಕ್ಕರೆ? ಇದೇ ಮಾದರಿಯ ಸ್ಫೋಟ ಜನವಸತಿ ಪ್ರದೇಶದಲ್ಲಿ ನಡೆದಿದ್ದರೆ ಆಗುವ ಹಾನಿಯ ಬಗ್ಗೆ ಆಲೋಚನೆ ಮಾಡಬೇಕು. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಂದ ಸ್ಪೋಟಕ ಬಂತು, ಹೇಗೆ ಬರುತ್ತದೆ, ಕಲ್ಲುಕ್ವಾರಿ ನಡೆಸಲು ಪರವಾನಗಿ ಇತ್ತೋ, ಇಲ್ಲವೋ ಇದೆಲ್ಲದರ ಬಗ್ಗೆ ವ್ಯಾಪಕ ತನಿಖೆಯಾಗಬೇಕು. ಈಗಾಗಲೇ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದು, ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ 6 ಜನ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ನೀಡಬಹುದು. ಅವರ ಜೀವ ತರಲು ಸಾಧ್ಯವಿಲ್ಲ. ಮುಂದೆ ಇಂತಹ ಅನಾಹುತ ಆಗದಂತೆ ಎಚ್ಚರ ವಹಿಸಬೇಕು. ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಿ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತಕ್ಕೆ ಜವಾಬ್ದಾರಿ ನೀಡಬೇಕು ಎಂದರು.

ಓದಿ: “ಕೈ’ನಿಂದ ಬಿಜೆಪಿ ಸದಸ್ಯರಿಗೆ ಆಮಿಷ: ಕಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next