Advertisement

ಶೃಂಗೇರಿ ಶಾರದಾಂಬಾ ದರ್ಶನಕ್ಕೆ ಅವಕಾಶ

10:17 PM Jul 06, 2021 | Team Udayavani |

ಶೃಂಗೇರಿ : ಲಾಕ್‌ಡೌನ್‌ ತೆರವಿನ ನಂತರ ಶ್ರೀ ಶಾರದಾ ಪೀಠಕ್ಕೆ ಸೋಮವಾರದಿಂದ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಸರಕಾರದ ನಿಯಮಾನುಸಾರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಮತ್ತು ಸಂಜೆ 5 ರಿಂದ 8 ರವರೆಗೂ ಪ್ರವೇಶ ನೀಡಲಾಗಿದೆ. ಮೊದಲ ದಿನವೇ ಪ್ರವಾಸಿಗರು ಆಗಮಿಸಿದ್ದು, ಇವರೊಂದಿಗೆ ಸ್ಥಳೀಯರು ಆಗಮಿಸಿದ್ದರು. ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಎಂದಿನಂತೆ ನಡೆದಿದ್ದು, ಭಕ್ತಾದಿಗಳು ಮಹಾ ಮಂಗಳಾರತಿ ವೀಕ್ಷಿಸಿದರು.

ದೇಗುಲದಲ್ಲಿ ಪ್ರಸಾದ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಹಾಗೆಯೇ ಭೋಜನ ಹಾಗೂ ವಸತಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಮಳೆಯ ದೇವರೆಂದು ಹೆಸರು ಪಡೆದಿರುವ ಶ್ರೀ ಕಿಗ್ಗಾ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿಯೂ ಬೆಳಗ್ಗೆಯಿಂದ ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ.

ಸ್ಥಳೀಯರು ಹಾಗೂ ಪ್ರವಾಸಿಗರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next