Advertisement

ಬಾವಿಗೆ ಬಿದ್ದ ಹಸು ರಕ್ಷಣೆ

10:45 PM Jun 28, 2021 | Team Udayavani |

ಶೃಂಗೇರಿ :  ಆಳದ ಬಾವಿಗೆ ಬಿದ್ದಿದ್ದ ಹಸುವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶಿಡ್ಲೆಯಲ್ಲಿ ಶನಿವಾರ ನಡೆದಿದೆ.

Advertisement

ಕೂತಗೋಡು ಗ್ರಾಪಂನ ಶಿಡ್ಲೆಯಲ್ಲಿ ತೆರೆದ 80 ಅಡಿ ಬಾವಿಗೆ ಹಸು ಬಿದ್ದಿದ್ದು, ವೈ.ಎಸ್‌. ಶಶಿಧರ್‌ ಎಂಬುವವರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಎ.ಎಲ್‌.ಪುನೀತ್‌ ಮತ್ತು ಎಚ್‌.ಬಿ. ಮಧು ಬಾವಿಗೆ ಇಳಿದು ಹಸುವನ್ನು ರಕ್ಷಿಸಲು ಮುಂದಾಗಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಸಹಾಯದಿಂದ ಹಸುವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಎಸ್‌.ಜಿ. ಗೋವಿಂದನಾಯ್ಕ, ಸಿ. ಸೋಮಶೇಖರ್‌,ಪ್ರಕಾಶ್‌, ಆರ್‌. ರಾಘವೇಂದ್ರ, ದೇವೇಂದ್ರ ರಾಥೋಡ್‌, ಗೃಹ ರಕ್ಷಕದಳದ ಚಂದ್ರಶೇಖರ್‌, ಅನಿಲ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next