Advertisement

ತೌಕ್ತೇ ಅಬ್ಬರ: ಮಲೆನಾಡಲ್ಲಿ ಮಳೆ

10:27 PM May 17, 2021 | Team Udayavani |

ಚಿಕ್ಕಮಗಳೂರು: ಅರಬ್ಬಿ ಸುಮುದ್ರದಲ್ಲಿ ಚಂಡಮಾರುತ ಎದ್ದ ಪರಿಣಾಮ ಶನಿವಾರ ಜಿಲ್ಲಾದ್ಯಂತ ಆರ್ಭಟಿಸಿದ್ದ ಭಾರೀ ಮಳೆ ಭಾನುವಾರ ಸಂಜೆ ವೇಳೆಗೆ ಕ್ಷೀಣಿಸಿದೆ. ಎರಡು ದಿನದ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯವರೆಗೂ ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಸಂಜೆಯ ವೇಳೆಗೆ ಕ್ಷೀಣಿಸಿದೆ. ಎರಡು ದಿನದ ಮಳೆಗೆ ಮರಗಳು, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಕರೆ, ಹಳ್ಳಕೊಳ್ಳಗಳು ತುಂಬಿವೆ. ಮಲೆನಾಡು ಭಾಗದಲ್ಲಿ ಹರಿಯುವ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಕೊಂಚ ಮಟ್ಟಿನ ಏರಿಕೆ ಕಂಡಿದೆ.

ಮೂಡಿಗೆರೆ ತಾಲೂಕಿನ ಕಳಸ, ಕೊಟ್ಟಿಗೆಹಾರ, ಜಾವಳಿ, ಹಿರೇಬೈಲ್‌, ಕುದುರೆಮುಖ, ಕಿರುಗುಂದ, ಬಣಕಲ್‌, ಬಾಳೂರು, ಚಾರ್ಮಾಡಿ, ಸಂಸೆ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಶೃಂಗೇರಿ, ಕೊಪ್ಪ, ಬಸರೀಕಟ್ಟೆ, ಜಯಪುರ, ಹರಿಹರಪುರ, ಕಿಗ್ಗಾ, ಕೆರೆಕಟ್ಟೆ, ನೆಮ್ಮಾರ್‌, ಎನ್‌.ಆರ್‌. ಪುರ, ಮಾಗುಂಡಿ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕು ಸುತ್ತಮುತ್ತ ಭಾನುವಾರ ಸಾಧಾರಣ ಮಳೆಯಾಗಿದೆ.

ಮಧ್ಯಾಹ್ನದ ವೇಳೆಗೆ ಮಳೆ ಕ್ಷೀಣಗೊಂಡಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಕಡೂರು, ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಜಾನೆ ಸಾಧಾರಣ ಮಳೆಯಾಗಿದ್ದು, ಉಳಿದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next