Advertisement

ಮೇಕೆದಾಟು ಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟು ಬೇರೇನಿಲ್ಲ

09:14 PM Mar 01, 2022 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್‌ ಮೇಕೆದಾಟುಪಾದಯಾತ್ರೆಯಲ್ಲಿ ರಾಜಕಾರಣ ಬಿಟ್ಟರೆಬೇರೇನೂ ಇಲ್ಲ ಎನ್ನುವುದು ಎಲ್ಲರಿಗೂಸ್ಪಷ್ಟವಾಗಿದೆ ಎಂದು ಶಾಸಕ ಸಿ.ಟಿ.ರವಿಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮೇಕೆದಾಟುವಿಚಾರದಲ್ಲಿ ನಮ್ಮ ಪ್ರಶ್ನೆಗಳಿಗೆ ಕಾಂಗ್ರೆಸ್‌ನವರು ಇದುವರೆಗೂ ಉತ್ತರ ಕೊಟ್ಟಿಲ್ಲ.

Advertisement

ಇಲ್ಲಿ ಪಾದಯಾತ್ರೆ ನಾಟಕ ಮಾಡುವಬದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನೇತೃತ್ವದ ನಿಯೋಗಕಾಂಗ್ರೆಸ್‌ನ ಚಿದಂಬರಂ ಮತ್ತುಡಿಎಂಕೆ ಸ್ಟಾಲಿನ್‌ ಅವರನ್ನು ಒಪ್ಪಿಸಿದರೆಮೇಕೆದಾಟು ಯೋಜನೆ ಜಾರಿಸುಲಭವಾಗುತ್ತದೆ ಎಂದು ತಿರುಗೇಟುನೀಡಿದರು.ತಮಿಳುನಾಡಿನ ಆಕ್ಷೇಪಣೆ ಇಲ್ಲಅಂದರೆ ಎಲ್ಲಾ ರೀತಿಯ ಅಡೆತಡೆಗಳುನಿವಾರಣೆಯಾಗುತ್ತವೆ.

ಅದನ್ನು ಬಿಟ್ಟುಪಾದಯಾತ್ರೆ ಮಾಡಿದರೆ ದೈಹಿಕ ಕಸರತ್ತುಆಗುತ್ತದೆ ಎಂದ ಅವರು, ತಮಿಳುನಾಡುಒಪ್ಪಿಸೋ ತಾಕತ್ತು ಸಿದ್ದರಾಮಯ್ಯಅವರಿಗಿದೆ ಎಂದರು.

ಸಿದ್ದರಾಮಯ್ಯ ಗುಟುರು ಹಾಕಿದರೆಸೋನಿಯಾ ಗಾಂ ಧಿ ಅಲರ್ಟ್‌ ಆಗ್ತಾರೆ.ಸೋನಿಯಾ ಗಾಂ ಧಿ ಮಾತು ಚಿದಂಬರಂತೆಗೆದುಹಾಕುವುದಿಲ್ಲ, ಚಿದಂಬರಂ ಒಂದುಮಾತು ಹೇಳಿದರೆ ಸ್ಟಾಲಿನ್‌ ಒಪ್ಪಿಕೊಳ್ತಾರೆ.ಇದು ಸುಲಭ. ಆದರೆ, ಪಾದಯಾತ್ರೆಉದ್ದೇಶ ರಾಜಕಾರಣ ಬಿಟ್ಟುಬೇರೇನೂ ಇಲ್ಲ ಎಂದರು.

ಹಿಜಾಬ್‌ ವಿವಾದದಮೂಲಕ ಕಾಂಗ್ರೆಸ್‌ ಮತೀಯವಾದವನ್ನು ಹೊರಹಾಕಿದೆ.ಕಾಂಗ್ರೆಸ್‌ನ ಜಾತ್ಯತೀತವಾದಒಂದು ನಾಟಕ. ಹಿಂದೂಗಳಮೇಲೆ ಪ್ರಹಾರ ಮಾಡಲು ಮಾತ್ರಉಪಯೋಗಿಸುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next