Advertisement

ಉದ್ಯೋಗ ಮಾಡಿ ಸಬಲರಾಗಿ: ಡೀಸಿ ಲತಾ

05:56 PM Jun 03, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ನಿಸರ್ಗ ಸರ್ಕಾರೇತರಸಂಸ್ಥೆ ಸಹಯೋಗದಲ್ಲಿ ಮಂಗಳವಾರ ವಾಪಸಂದ್ರದಸರ್ಕಾರಿ ಶಾಲೆಯ ಆವರಣದಲ್ಲಿ ತೃತೀಯ ಲಿಂಗಿಗಳಿಗೆಜಿಲ್ಲಾಧಿಕಾರಿ ಆರ್‌.ಲತಾ, ನಗರಸಭಾಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ(ಬಾಬು) ಆಹಾರಕಿಟ್‌ ವಿತರಿಸಿದರು.

Advertisement

ಡೀಸಿ ಆರ್‌.ಲತಾಮಾತನಾಡಿ, ತೃತೀಯ ಲಿಂಗ ಸಮುದಾಯ ದವರ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ.ಜಿಲ್ಲಾಡಳಿತವೂ ಸ್ವ ಉದ್ಯೋಗ ಹೊಂದಲು ಹಲವಾರು ತರಬೇತಿಯನ್ನು ಜಿಲ್ಲಾ ಲೀಡ್‌ ಬ್ಯಾಂಕ್‌ ಮೂಲಕಕೈಗೊಳ್ಳುತ್ತಿರುತ್ತದೆ. ತಮಗೆ ಇಷ್ಟವಿರುವಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದುಸಲಹೆ ನೀಡಿದರು.

ಕೋವಿಡ್‌ ಪಿಡುಗಿನ ಸಂಕಷ್ಟದಕಾಲದಲ್ಲಿನಿಸರ್ಗ ಸಂಸ್ಥೆ ಟ್ರಾನ್ಸ್‌ ಜಂ ಡರ್ಸ್‌ ಸೇರಿ ಜಿಲ್ಲೆಯ2000ತೃತೀಯ ಲಿಂಗಿಗಳಿಗೆ ಆಹಾರದಕಿಟ್‌ ವಿತರಿಸಲು ಮುಂದೆಬಂದಿರುವುದು ಶ್ಲಾಘನೀಯವೆಂದರು. ಈ ವೇಳೆ ನಿಸರ್ಗಸಂಸ್ಥೆ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next