Advertisement

ಅನೈತಿಕ ಸಂಬಂಧ ವಿಚಾರ ಗಲಾಟೆಯಲ್ಲಿ ವಯೋವೃದ್ಧೆಯ ಕೊಲೆ : ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಬಂಧನ

09:56 PM Nov 01, 2020 | sudhir |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೋಲಿಸ್‍ ಠಾಣೆಯ ವ್ಯಾಪ್ತಿಯಲ್ಲಿ ವಯೋವೃದ್ಧೆಯನ್ನು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನೊಬ್ಬ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

Advertisement

ಕೊಂಡಮ್ಮ ಕೋಂ ಲೇಟ್ ತಿಮ್ಮಯ್ಯ ಕೊಲೆಗೀಡಾದ ವಯೋವೃದ್ದೆ ಮಹಿಳೆ, ಆಕೆಯನ್ನು ಕೊಲೆ ಮಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

ಗಂಗಸಂದ್ರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಅವರ ಇಟ್ಟಿಗೆ ಕಾರ್ಖಾನೆಯಲ್ಲಿ ಸರೋಜಮ್ಮ ಎಂಬಾಕೆಯ ಪತಿ ಗಂಗಪ್ಪ ಕೆಲಸ ಮಾಡುತ್ತಿದ್ದು ಆರೋಪಿ ವೆಂಕಟೇಶ್ ಕೊಲೆಗೀಡಾದ ಕೊಂಡಮ್ಮ ಸೊಸೆ ಸರೋಜಮ್ಮ ಎಂಬಾಕೆಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದು ಈ ವಿಚಾರ ಬಹಿರಂಗಗೊಂಡ ಬಳಿಕ ಅನೇಕ ಬಾರಿ ಗಲಾಟೆಯಾಗಿದೆ ಇಂದು ಸಹ ಗಲಾಟೆಯಾಗಿ ಕೊಂಡಮ್ಮ ಎಂಬಾಕೆಯನ್ನು ಕೋಲಿಂದ ಹೊಡೆದು ಕೊಲೆ ಮಾಡಲಾಗಿದೆ.

ಇದನ್ನೂ ಓದಿ:ಉದ್ಘಾಟನೆಗೊಂಡ ಮೊದಲ ದಿನವೇ ಸೀಪ್ಲೇನ್ ಸಂಚಾರಕ್ಕೆ 3000 ಬುಕಿಂಗ್‌!

ಇದೇ ವೇಳೆಯಲ್ಲಿ ಆರೋಪಿ ವೆಂಕಟೇಶ್ ಸಹ ದ್ವಿಚಕ್ರ ವಾಹನದಲ್ಲಿ ಬಿದ್ದು ತಲೆಗೆ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next