Advertisement

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

11:01 PM May 06, 2024 | Team Udayavani |

ಚಿಕ್ಕಬಳ್ಳಾಪುರ: ಆಂಧ್ರದ ವಿಶಾಖಪಟ್ಟಣಂನಿಂದ ಅಕ್ರಮವಾಗಿ ಚಿಕ್ಕಬಳ್ಳಾಪುರ ನಗರಕ್ಕೆ ಗಾಂಜಾ ತರುತ್ತಿದ್ದ ವೇಳೆ ಜಿಲ್ಲೆಯ ಬಾಗೇಪಲ್ಲಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತರನ್ನು ಚಿಕ್ಕಬಳ್ಳಾಪುರದ ಕಂದವಾರಪೇಟೆ ನಿವಾಸಿ 28 ವರ್ಷದ ವೇಣುಗೋಪಾಲ ಬಿನ್ ತುಳಿಸಿರಾಮ ಕೆ.ಸಿ, ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಅಂದಾರ್ಲಹಳ್ಳಿ ಗ್ರಾಮದ ನಿವಾಸಿ 27 ವರ್ಷದ ಪೋಟೋಗ್ರಾಫರ್ ಅಕ್ಷಯ್ ಕುಮಾರ್ ಬಿನ್ ವೆಂಕಟೇಶ ಎಂದು ಗುರುತಿಸಲಾಗಿದೆ.

ಇಬ್ಬರು ಆಸಾಮಿಗಳು ಒಂದು ಟ್ರಾವೆಲಿಂಗ ಬ್ಯಾಗ್ ನ್ನು ಹಿಡಿದುಕೊಂಡು ಟೋಲ್ ಪ್ಲಾಜಾದ ಕಡೆಗೆ ನಡೆದುಕೊಂಡು ಬರುತಿದ್ದಾಗ ಚೆಕ್ ಪೊಸ್ಟ್ ಬಳಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಬ್ಯಾಗ್ ನೊಂದಿಗೆ ಟೋಲ್ ಪ್ಲಜಾ ಕಡೆ ಓಡಿಹೋಗಲು ಪ್ರಯತ್ನಿಸಿದಾಗ ಪೊಲೀಸರು ಬೆನ್ನಟ್ಟಿ ಅವರನ್ನು ಹಿಡಿದು ವಿಚಾರಿಸಿದಾಗ ಬ್ಯಾಗ್‌ನಲ್ಲಿ ಸುಮಾರು 20 ಕೆಜಿ 250 ಗ್ರಾಂ ನಷ್ಟು ಗಾಂಜಾ ಇರುವುದು ಪತ್ತೆಯಾಗಿದೆ. ಅಲ್ಲದೇ ಈ ಗಾಂಜಾವನ್ನು ಚಿಕ್ಕಬಳ್ಳಾಪುರದ ಅಜ್ಮತ್ ರವರು ವಿಶಾಕಪಟ್ಟಣಂನಿಂದ ತೆಗೆದುಕೊಂಡು ಬರುವಂತೆ ತಿಳಿಸಿದ್ದು ಅದರಂತೆ ನಾವುಗಳು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂಧಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next