Advertisement

ಚಿಕ್ಕಬಳ್ಳಾಪುರ ಲಾಕ್ ಡೌನ್: ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸ್ ಲಾಠಿ ರುಚಿ

11:16 AM Mar 27, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ‌ ಕೋವಿಡ್-19 ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.

Advertisement

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರು ತರಕಾರಿ, ಹೂ, ಇತರ ಸಾಮಾಗ್ರಿಗಳ ಖರೀದಿಗೆ ಮುಂದಾಗಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ‌ಎಂದಿನಂತೆ ವಹಿವಾಟು ನಡೆಯುತ್ತಿತ್ತು. ಪೊಲೀಸರು ಅಲ್ಲಲ್ಲಿ ಇದ್ದು ಜನರ ದಟ್ಟಣೆ ನಿಯಂತ್ರಣಕ್ಕೆ‌ ಹರಸಾಹಸ ಪಡುವಂತಾಗಿದೆ.

ಲಾಕ್ ಡೌನ್ ದಿಕ್ಕರಿಸಿ ರಸ್ತೆಗೆ ಇಳಿದ ವಾಹನ ಸವಾರರಿಗೆ ಪೊಲೀಸರು‌ ಲಾಠಿ‌ ರುಚಿ ತೋರಿಸುವ ಮೂಲಕ ಬುದ್ದಿವಾದ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸೆಕ್ಷನ್ 144 ಜಾರಿಯಲ್ಲಿ ‌ಇದ್ದರೂ ಗುಂಪು ಗುಂಪುಗಳಾಗಿ ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next