Advertisement

ಮುಖ್ಯ ಪ್ರಾಸಿಕ್ಯೂಟರ್‌ ವಜಾ

08:45 AM Apr 30, 2018 | Team Udayavani |

ಲಾಹೋರ್‌ : ಮಹತ್ವದ ಬೆಳವಣಿಗೆಯಲ್ಲಿ ಮುಂಬಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಪ್ರಾಸಿಕ್ಯೂಟರ್‌ ಚೌಧರಿ ಅಜರ್‌ ಅವರನ್ನು ಪಾಕಿಸ್ಥಾನದ ಗೃಹ ಸಚಿವಾಲಯ ವಜಾಗೊಳಿಸಿದೆ. ಸರಕಾರದ ಹೇಳಿಕೆ ದಾಖಲಿಸಿಲ್ಲ ಎನ್ನುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ. ಇದರಿಂದಾಗಿ ಮುಂಬಯಿ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ಭಾರತಕ್ಕೆ ಕೊಂಚ ಹಿನ್ನಡೆಯಾಗಿದೆ. 2008ರ ನವೆಂಬರ್‌ನಲ್ಲಿ ಕರಾಚಿಯಿಂದ ಆಗಮಿಸಿದ್ದ ಲಷ್ಕರ್‌ ಉಗ್ರರು ಮುಂಬಯಿಯಲ್ಲಿ ದಾಳಿ ನಡೆಸಿ 166 ಮಂದಿಯನ್ನು  ಬಲಿ ಪಡೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next