Advertisement

ಉಡುಪಿ ಎಸ್ಪಿ, ಡಿವೈಎಸ್‌ಪಿಗೆ ಮುಖ್ಯಮಂತ್ರಿ ಪದಕ

12:18 AM Mar 11, 2020 | mahesh |

ಉಡುಪಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಹಾಗೂ ಪೊಲೀಸ್‌ ಉಪ ಅಧೀಕ್ಷಕ ಜೈ ಶಂಕರ್‌ ಅವರಿಗೆ 2017ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.

Advertisement

ಜನವರಿಯಿಂದ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಷ್ಣುವರ್ಧನ್‌ ಅವರು 2005ರಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಸೇವೆಗೆ ಸೇರಿ ಕೊಡಗಿನ ವೀರಾಜಪೇಟೆಯಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ಆರಂಭಿಸಿದ್ದರು. 2015ರಲ್ಲಿ ಐಪಿಎಸ್‌ ಹುದ್ದೆಗೆ ಭಡ್ತಿ ಪಡೆದಿದ್ದರು. 2016, 2017ರಲ್ಲಿ ಉಡುಪಿ ಹೆಚ್ಚುವರಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.

1996ರಲ್ಲಿ ಪೊಲೀಸ್‌ ಸೇವೆಗೆ ಸೇರಿದ್ದ ಜೈಶಂಕರ್‌ ಅವರು, ಕರಾವಳಿ ಕಾವಲು ಪಡೆ, ಡಿಸಿಆರ್‌ಬಿ ಸಹಿತ ವಿವಿಧೆಡೆ ಕಾರ್ಯನಿರ್ವಹಿಸಿ 2019ರಿಂದ ಉಡುಪಿ ವಿಭಾಗದ ಡಿವೈಎಸ್‌ಪಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next