Advertisement

ಮುಖ್ಯಮಂತ್ರಿ ಯಡಿಯೂರಪ್ಪಗೆ ಶ್ರೀಗಳ ಶ್ರೀರಕ್ಷೆ

05:43 PM Jun 28, 2021 | Team Udayavani |

ಬೆಂಗಳೂರು: ವಿಧಾನಸೌಧದಲ್ಲಿ ನಡೆದನಾಡಪ್ರಭು ಕೆಂಪೇಗೌಡರ 512ನೇಜಯಂತಿ ಕಾರ್ಯಕ್ರಮ ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ ಅವರಿಗೆ”ಶ್ರೀಗಳ ಶ್ರೀರಕ್ಷೆ’ಗೆ ಸಾಕ್ಷಿಯಾಯಿತು.

Advertisement

ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಹಾಗೂ ತುಮಕೂರು ಸಿದ್ಧಗಂಗಾಮಠದಸಿದ್ಧಲಿಂಗ ಮಹಾಸ್ವಾಮೀಜಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಮೆಚ್ಚುಗೆಯ ಮಾತನಾಡಿ,ಅವರವ್ಯಕ್ತಿತ್ವವನ್ನುಹಾಡಿ ಹೊಗಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, “ಒಳ್ಳೆಯದು ಎಲ್ಲೇಬರಲಿ ಅದನ್ನು ಸ್ವೀಕರಿಸುವ ಮನೋಭಾವವನ್ನು ಯಡಿಯೂರಪ್ಪ ಹೊಂದಿದ್ದಾರೆ.ಒಬ್ಬ ಸಿಎಂ ಅಂದರೆ ಹೇಗಿರಬೇಕು ಅನ್ನುವುದಕ್ಕೆ ಯಡಿಯೂರಪ್ಪನವರನ್ನುತೋರಿಸಬಹುದು.

ಎಲ್ಲಾಜಾತಿ-ಜನಾಂಗಗಳಬಗ್ಗೆ ಒಲವು ತೋರಿ ಅವರನ್ನು ಮೇಲಕ್ಕೆತ್ತುವಸಾಹಸದ ಕೆಲಸ ಮಾಡುತ್ತಿದ್ದಾರೆ. ಏನೇಇರಲಿ ಯಡಿಯೂರಪ್ಪ ಅವರದ್ದು ಜಗ್ಗದಬಹುದೊಡ್ಡ ಗಟ್ಟಿ ವ್ಯಕ್ತಿತ್ವ. ಅವರ ವಯಸ್ಸುಎಷ್ಟು ಅನ್ನುವುದು ಗೊತ್ತಿಲ್ಲ. ಆದರೆ, ಅವರು20ರ ಹರೆಯದ ಮನಸ್ಸಿನಿಂದ ಕೆಲಸಮಾಡುತ್ತಿದ್ದಾರೆ’ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧಿಪತಿ ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, “ಮ್ಯಾನ್‌ ಅÂಟ್‌ ದಿಟಾಪ್‌ ಈಸ್‌ ಆಲ್‌ವೇಸ್‌ ಲೋನ್ಸಿ’ ಎಂಬಮಾತಿದೆ. ಸಾಮಾನ್ಯವಾಗಿ ಯಡಿಯೂರಪ್ಪನವರು ಯಾವಾಗಲೂ ಮೌನವಾಗಿರುತ್ತಾರೆ.ಅದು ಲೋನ್ಲಿ (ಏಕಾಂಗಿ) ಎಂಬ ಕಾರಣಕ್ಕೆಅಲ್ಲ. ಆಡಳಿತ ನಡೆಸುವವರು, ಅಧಿಕಾರಿದಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಹೇಗೆನಡೆದುಕೊಳ್ಳಬೇಕು ಎಂಬುದುಕ್ಕೆ ಇತರರಿಗೆ ಯಡಿಯೂರಪ್ಪನವರು ಮಾದರಿ. “ÊÞ® ‌ …ಅÂಟ್‌ದಿ ಟಾಪ್‌ ಈಸ್‌ಆಲ್‌ವೇಸ್‌ ಲೋನ್ಸಿ’ಎಂಬ ಮಾತು ಬೇರೆಯವರು ಯಾವಅರ್ಥದಲ್ಲಿ ಹೇಳಿದರು ನನಗೆ ಗೊತ್ತಿಲ್ಲ.ಆದರೆ, ಇತ್ತಿಚಿಗೆ ನಾವೆಲ್ಲಾ ನೋಡಿದ್ದೇವೆ, ಸಿಎಂ ಅವರ ಜೊತೆ ನಿಂತು, ಅವರ®ು‌ ° ಬೆಂಬಲಿಸಿ ಸೇವೆ ಮಾಡುವ ಜನ ಎಷ್ಟಿದ್ದಾರೆಂದು.ಸರ್ವ ಧರ್ಮಿಯರು, ಸರ್ವ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ’.

Advertisement
Advertisement

Udayavani is now on Telegram. Click here to join our channel and stay updated with the latest news.

Next