Advertisement

ನಾಳೆ ಸಂಪುಟ ವಿಸ್ತರಣೆ:ಗೀತಾ ಮಹಾದೇವ್‌ಪ್ರಸಾದ್‌ಗೆ ಸ್ಥಾನ 

12:40 PM Aug 31, 2017 | Team Udayavani |

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ನಾಳೆ ಶುಕ್ರವಾರ ಸಂಜೆ ರಾಜಭವನದಲ್ಲಿ ಮೂವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

Advertisement

ಭಾರೀ ಲೆಕ್ಕಾಚಾರಗಳ ನಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಮಾಜಿ ಸಚಿವ ದಿವಂಗತ ಮಹದೇವ್‌ ಪ್ರಸಾದ್‌ ಅವರ ಪತ್ನಿ  ಗೀತಾ ಮಹದೇವ ಪ್ರಸಾದ್‌ ಅವರಿಗೆ ಮಹಿಳಾ ಮತ್ತು ಲಿಂಗಾಯತ ಕೋಟಾ ದಲ್ಲಿ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. 

ಇನ್ನುಳಿದಂತೆ ಕುರುಬ ಕೋಟಾದಲ್ಲಿ ಎಚ್‌.ಎಂ.ರೇವಣ್ಣ, ದಲಿತ ಕೋಟಾದಡಿ ಆರ್‌.ಬಿ.ತಿಮ್ಮಾಪುರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಮೂವರ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯ ರಾಜಭವನಕ್ಕೆ ಶಿಫಾರಸು ಮಾಡಿದ್ದು, ನಾಳೆ ಸಂಜೆ 5 ಗಂಟೆಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next