Advertisement

ಯಡಿಯೂರಪ್ಪ ಹೇಳುವುದು ಅಸಂಬದ್ಧ ;ಯಾವುದಾದ್ರೂ ನಿಜ ಆಗಿದ್ಯಾ? 

04:52 PM Apr 26, 2017 | Team Udayavani |

ಮೈಸೂರು :  ಯಡಿಯೂರಪ್ಪ ಅವರು ಹೇಳುವುದೆಲ್ಲಾ ಅಸಂಬದ್ಧ ಹೇಳಿಕೆಗಳು,ಯಾವುದಾದ್ರೂ ನಿಜ ಆಗಿದೆಯಾ? ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸುದ್ದಿಗಾರರು ಬುಧವಾರ 11 ತಿಂಗಳ ಮುಂಚೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಪ್ರಶ್ನಿಸಿದಾಗ ಕೆಂಡಾಮಂಡಲವಾದ ಸಿಎಂ ಬಿಎಸ್‌ವೈ ವಿರುದ್ಧ ಕಿಡಿ ಕಾರಿ ‘ಅವರೇನು ಚುನಾವಣಾ ಆಯುಕ್ತರಾ ? ಅವರು ಅಸಂಬದ್ಧ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸದೇ ಇರುವುದು ಒಳ್ಳೆಯದು’ ಎಂದರು. 

‘ಅವರು ಹೇಳಿಕೆ ನೀಡಿದರೆ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತದೆ. ಮಾಡಬಾರದ್ದೆಲ್ಲಾ ಅಧಿಕಾರದಲ್ಲಿದ್ದಾಗ ಮಾಡಿದ್ದಾರೆ. ಅವರು ಟೀಕೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ’ ಎಂದರು.

ಮಂಗಳವಾರ ಮೈಸೂರಿನಲ್ಲಿ ಯಡಿಯೂರಪ್ಪ ಅವರು ’11 ತಿಂಗಳಿಗೆ ಮುಂಚೆಯೆ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ’ ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next