Advertisement

ಕುಮಾರಸ್ವಾಮಿ ಅಯೋಗ್ಯ ಮುಖ್ಯಮಂತ್ರಿ

11:47 AM Mar 29, 2019 | Lakshmi GovindaRaju |

ಶಿವಮೊಗ್ಗ: ಕಳ್ಳರಿಗೆ ಬೆಂಬಲ ಕೊಟ್ಟ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೂಡಲೇ ರಾಜೀನಾಮೆ ಕೊಡಬೇಕು. ರಾಜ್ಯಪಾಲರು ಕುಮಾರಸ್ವಾಮಿ ಅವರ ಹೇಳಿಕೆ ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯ. ಮುಖ್ಯಮಂತ್ರಿ ಸ್ಥಾನದಲ್ಲಿರೋರು ಗೌಪ್ಯತೆ ಕಾಪಾಡಬೇಕು. ಆದರೆ ಇವರು ಆ ಗೌಪ್ಯತೆ ಕಾಪಾಡೋದು ಬಿಟ್ಟು ಹಾಳು ಮಾಡುತ್ತಿದ್ದಾರೆ. ಕಳ್ಳರನ್ನು ರಕ್ಷಿಸಲು ಮೊದಲೇ ಹೇಳಿದ್ದಾರೆ ಎಂದು ದೂರಿದರು.

ಐಟಿ ಅಧಿಕಾರಿಗಳು ಮಂಡ್ಯದಲ್ಲಿ ಜೆಡಿಎಸ್‌ನವರ ಮನೆಗಳ ಮೇಲೆ ರೇಡ್‌ ಮಾಡ್ತಿದ್ದಾರೆ ಅಂತೀರಾ? ಮಂಡ್ಯ ಭಾರತದಲ್ಲಿ ಇಲ್ವಾ, ಅಧಿಕಾರಿಗಳು ಅವರ ಕೆಲಸ ಅವರು ಮಾಡ್ತಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ಕುಮಾರಸ್ವಾಮಿ ಅಯೋಗ್ಯ. ಕೂಡಲೇ ರಾಜೀನಾಮೆ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next