Advertisement

ಕಲಬುರಗಿಯ ಹೇರೂರಿನ ಸಿಎಂ ಗ್ರಾಮ ವಾಸ್ತವ್ಯ ಮುಂದೂಡಿಕೆ

09:43 AM Jun 24, 2019 | Team Udayavani |

ಕಲಬುರಗಿ: ಅಫ್ಜಲ್‌ಪುರದ ಹೇರೂರ (ಬಿ) ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಭಾರೀ ಮಳೆಯ ಕಾರಣ ಮುಂದೂಡಿಕೆಯಾಗಿದೆ.

Advertisement

ಸಿಎಂ ಈ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಭಾರೀ ಮಳೆಯಾಗಿರುವುದು ನನಗೆ ಹರ್ಷ ತಂದಿದೆ. ಕಾರ್ಯಕ್ರಮ ರದ್ದಾಗಿಲ್ಲ, ಮಳೆಗಾಲದ ಅಧಿವೇಶನ ನಡೆಯುವುದಿದೆ, ಆ ಬಳಿಕ ಕಾರ್ಯಕ್ರಮವನ್ನು ಆಯೋಜಿಸಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಶುಕ್ರವಾರ ಸಂಜೆಯಿಂದ ಹೆರೂರ (ಬಿ) ಗ್ರಾಮದಲ್ಲಿ ಭಾರೀ ಮಳೆ ಸುರಿದಿದೆ. ಸಿಎಂ ಸಮಾರಂಭ ನಡೆಯಬೇಕಾಗಿದ್ದ ಮೈದಾನದಲ್ಲಿ ಅಪಾರ ಪ್ರಮಾಣದ ನೀರು ತುಂಬಿಕೊಂಡಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಸುವುದು ಅಸಾಧ್ಯವಾಗಿದೆ.

ಚಂಡರಕಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳ ಬಳಿಕ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯ ಕೋಣೆಯಲ್ಲೇ ಮಲಗಿದರು.  ಫ್ಯಾನ್‌ ಅಳವಡಿಸಿದ್ದನ್ನು ಬಿಟ್ಟರೆ ಆಧುನಿಕ ಸೌಲಭ್ಯಗಳಿರಲಿಲ್ಲ. ಚಾಪೆ ಹಾಗೂ ದಿಂಬಿ ನೊಂದಿಗೆ ಸರಳವಾಗಿ ನಿದ್ದೆಗೆ ಶರಣಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next