Advertisement

ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗದಿಂದ ಸಿಎಂ ಭೇಟಿ

09:45 AM Oct 29, 2019 | Sriram |

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 70 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಗತ್ಯ ಸಹಕಾರ ಕೋರಿ ಮಂಡಳಿಯ ಸದಸ್ಯರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.

Advertisement

ಶಾಸಕ ಕುಮಾರ್‌ ಬಂಗಾರಪ್ಪ, ಮಂಡಳಿ ಅಧ್ಯಕ್ಷ ಡಿ.ಆರ್‌.ಜಯರಾಜ್‌ ಮೊದಲಾದವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವ ನಿಯೋಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 70 ವರ್ಷದ ಸಂಭ್ರಮ ಹಿನ್ನಲೆ ಸರ್ಕಾರದಿಂದ ಸಹಕಾರಕ್ಕೆ ಮನವಿ ಮಾಡಿದರು.

ವಾಣಿಜ್ಯ ಮಂಡಳಿಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡುವುದು, ಮೈಸೂರಿನಲ್ಲಿ ಗುರುತಿಸಿರುವ ಜಾಗದಲ್ಲಿ ಚಿತ್ರ ನಗರಿ (ಫೀಲ್ಮ ಸಿಟಿ) ನಿರ್ಮಾಣಕ್ಕೆ ಆದಷ್ಟು ಬೇಗ ಗುದ್ದಲಿಪೂಜೆ ನೆರವೇರಿಸುವುದು, ಚಿತ್ರೋದ್ಯಮದಿಂದ ಬರುವ ರಾಜ್ಯದ ಪಾಲಿನ ಹಣವನ್ನು ಚಿತ್ರ ನಿರ್ಮಾಪಕರಿಗೆ ಹಿಂದಿರುಗಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ಏಕಗವಾಕ್ಷಿ ಪದ್ದತಿಯನ್ನು ಕೂಡಲೇ ಅನುಷ್ಠಾನ ಮಾಡುವುದು, ಅಮೃತ ಮಹೋತ್ಸವದ ಸವಿನೆನಪಿಗಾಗಿ ನಂದಿನ ಬಡಾವಣೆಯಲ್ಲಿ ಜಾಗ ನೀಡಿರುವಂತೆ, ಚಿತ್ರೋದ್ಯಮದವರಿಗೆ ನಿವೇಶನ ಕಲ್ಪಿಸುವುದು, ರಾಜ್ಯದ ಯಾವುದೇ ಭಾಗದಲ್ಲಿ ಚಲನ ಚಿತ್ರಕ್ಕೆ ಸಂಬಂಧಿಸಿದ ಸೈಬರ್‌ಕ್ರೈಂ ಆದಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವುದು, ಚಲನಚಿತ್ರ ಅಕಾಡೆಮಿ, ಸಹಾಯಧನ, ಪ್ರಶಸ್ತಿ ಇನ್ನಿತರೆ ಆಯ್ಕೆ ಸಮಿತಿಗಳಿಗೆ ವಾಣಿಜ್ಯ ಮಂಡಳಿ ಸೂಚಿಸುವ ಸದಸ್ಯರಿಗೆ ಅವಕಾಶ ನೀಡುವುದು, ಬಿಬಿಎಂಪಿಯಿಂದ ವಾಣಿಜ್ಯ ಮಂಡಳಿಗೆ ಟಿಡಿಆರ್‌ ಕೊಡಿಸುವುದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಾಣಿಒಜ್ಯ ಮಂಡಳಿಗೆ ಪ್ರಮುಖ ಆದ್ಯತೆ ನೀಡುವುದು ಸೇರಿದಂತೆ ಹಲವು ಆಡಳಿತಾತ್ಮಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದೆ.

ಚಲನಚಿತ್ರ ಸೆನ್ಸಾರ್‌ಗಾಗಿ ಅನಿಮಲ್‌ ವೆಲ್ಫೆàರ್‌ ಬೋರ್ಡ್‌ ಶಾಖೆಯನ್ನು ದಕ್ಷಿಣ ಭಾರತದ ವಿಭಾಗಕ್ಕೆ ಬೆಂಗಳೂರಿನಲ್ಲಿ ತೆರೆಯಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು, ವ್ಯಾಟ್‌ ಪೂರ್ವಾನ್ವಯ ಆಗುವಂತೆ ಸಂಪೂರ್ಣ ಮನ್ನಾ ಮಾಡುವುದು, ಹಿಂದಿನ ಸರ್ಕಾರ ಮಲ್ಟಿಫ್ಲೆಕ್‌ ಚಿತ್ರಮಂದಿರಗಳ ಪ್ರವೇಶ ದರ 200ರೂ.ಗಳಿಗೆ ನಿಗದಿ ಪಡಿಸಿತ್ತು. ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ಗೃಹ ಇಲಾಖೆಯಿಂದ ಈ ಸಂಬಂಧ ಆದೇಶ ಹೊರಡಿಸುವುದು ಮತ್ತು ಚಿತ್ರ ಮಂದಿರಗಳ ಪರವಾನಿಗೆ ಶುಲ್ಕ ಬಹಳ ಹೆಚ್ಚಾಗಿರುವುದನ್ನು ಕಡಿತಗೊಳಿಸುವುದು ಸಹಿತವಾಗಿ ಹಲವು ತಿದ್ದುಪಡಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಮುಖ್ಯಮಂತ್ರಿಗಳಿಗೆ ನಿಯೋಗ ಮನವಿ ಮಾಡಿದೆ.

Advertisement

ನಂತರ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜಯರಾಜ್‌ ಮಾತನಾಡಿ, ಚಿತ್ರ ಮಂದಿರಗಳ ಪರವಾನಗಿ ನವೀಕರಣ ಶುಲ್ಕ ಕಡಿತ ಗೊಳಿಸವುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಸರ್ಕಾರ ಉದ್ದೇಶಿಸಿರುವ ಫಿಲಿ¾ ಸಿಟಿ ಮೈಸೂರಿನಲ್ಲಿ ಮಾಡಿದರೆ ಉತ್ತಮ. ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಪಡೆದಿದೆ. ಹೀಗಾಗಿ ಅಲ್ಲೇ ಫಿಲ್ಮ್ ಸಿಟಿ ಮಾಡಿದರೆ ಉತ್ತಮ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಡಾ.ರಾಜ್‌ ಕುಮಾರ್‌ ಪ್ರತಿಷ್ಠಾನ ಒಂದು ಪ್ರವಾಸೋದ್ಯಮ ಸ್ಥಳವಾಗಿದೆ. ಈ ಪ್ರತಿಷ್ಠಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಒಪ್ಪಿದ್ದರು. ಅವರ ಸರ್ಕಾರ ಇದ್ದಾಗ 22 ಕೋಟಿ ರೂ. ನೀಡಲು ಒಪ್ಪಿದ್ದರು. 10 ಕೋಟಿ ರೂ. ಬಜೆಟ್‌ನಲ್ಲಿ ನಿಗದಿ ಮಾಡಿದ್ದರು. ಈ ಅನುದಾನವನ್ನು ಈಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಕೇಳಿದ್ದೇವೆ ಎಂದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹೇಳಿದರು.

ಮುಖ್ಯಮಂತ್ರಿಗಳು ಅನುದಾನ ನೀಡಲು ಒಪ್ಪಿದ್ದಾರೆ. ಡಾ.ಅಂಬರೀಶ್‌ ಅವರ ಪ್ರತಿಷ್ಠಾನಕ್ಕೂ ಒಂದು ಟ್ರಸ್ಟ್‌ ರಚನೆ ಆಗಬೇಕಿದೆ. ಮುಂದಿನ ತಿಂಗಳ 24ರೊಳಗೆ ಟ್ರಸ್ಟ್‌ ರಚಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಟ್ರಸ್ಟ್‌ ರಚನೆಯ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next