Advertisement

ಮದುವೆ ದಿನ ವರನ ಮೇಲೆ ಆ್ಯಸಿಡ್ ಎರಚಿದ ಮಾಜಿ ಪ್ರಿಯತಮೆ: ಕೃತ್ಯಕ್ಕೆ ಸಹಾಯವಾಯಿತು ಕ್ರೈಮ್‌ ಶೋ

11:27 AM Apr 25, 2023 | Team Udayavani |

ಛತ್ತೀಸ್‌ಗಢ: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಛತ್ತೀಸ್‌ಗಢದ ಛೋಟೆ ಅಮಬಲ್ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಎ.19 ರಂದು ಈ ಘಟನೆ ನಡೆದಿದೆ. ದಮೃಧರ್ ಬಾಘೇಲ್ (25) 19 ವರ್ಷದ ಯುವತಿ ಜೊತೆ ವಿವಾಹವಾಗಲಿದ್ದರು. ಈ ವಿಚಾರವನ್ನು ತಿಳಿದ ದಮೃಧರ್ ಅವರ ಮಾಜಿ ಪ್ರಿಯತಮೆ ಈ ಕೃತ್ಯವನ್ನು ಎಸಗಿದ್ದಾಳೆ.

ಘಟನೆ ವಿವರ: ಕಳೆದ ಕೆಲ ಸಮಯದಿಂದ 23 ವರ್ಷದ ಯುವತಿ  ದಮೃಧರ್ ನನ್ನು ಪ್ರೀತಿಸುತ್ತಿದ್ದಳು. ಮದುವೆ ಬಗ್ಗೆ ಹಲವಾರು ಕನಸನ್ನು ಕಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಪ್ರಿಯಕರ ದಮೃಧರ್ ಯುವತಿಗೆ ಕೈಕೊಟ್ಟಿದ್ದಾನೆ. ಇದರಿಂದ ಸಹಜವಾಗಿ ಯುವತಿ ನೊಂದಿದ್ದಾಳೆ. ಇದಾದ ಕೆಲ ಸಮಯದ ಬಳಿಕ ಪ್ರಿಯಕರ ಕಾಲ್ , ಮೆಸೇಜ್‌ ಎಲ್ಲವನ್ನೂ ಮಾಡುವುದನ್ನು ಬಿಟ್ಟಿದ್ದಾನೆ. ಬೇರೊಂದು ಯುವತಿ ಜೊತೆ ವಿವಾಹವಾಗಲು ನಿಶ್ಚಯಿಸಿದ್ದಾನೆ.

ಇದನ್ನೂ ಓದಿ: Darshan: ಮಾಧ್ಯಮದವರ ಬಳಿ ವಿಷಾದ ವ್ಯಕ್ತಪಡಿಸಿದ ನಟ ದರ್ಶನ್? ಪತ್ರ ವೈರಲ್

ಕೃತ್ಯಕ್ಕೆ ಸಹಾಯವಾದ ಕ್ರೈಮ್‌ ಶೋ:  ಯುವಕ ಕೈ ಕೊಟ್ಟರು, ಆತ ತನ್ನಗಾಗಿ ಬರುತ್ತಾನೆಂದು ತನ್ನ ಪ್ರೀತಿಯನ್ನು ನಂಬಿಕೊಂಡಿದ್ದ ಯುವತಿಗೆ ನಿರಾಶೆಯಾಗಿದ್ದು, ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧಾರ ಮಾಡಿದ್ದಾಳೆ. ಟವಿಯಲ್ಲಿ ʼಕ್ರೈಂ ಪ್ಯಾಟ್ರೋಲ್ʼ ಎನ್ನುವ ಕ್ರೈಮ್‌ ಶೋವನ್ನು ನೋಡಿದ ಪ್ರಿಯತಮೆ, ಅಲ್ಲಿ ಆ್ಯಸಿಡ್ ಎರಚುವ ಕೃತ್ಯವೊಂದನ್ನು ನೋಡಿ ಹಾಗೆಯೇ ಮಾಡಲು ಹೊರಟಿದ್ದಾಳೆ.

Advertisement

ತನ್ನ ಪ್ರಿಯಕರನ ಮದುವೆಯ ಸಮಾರಂಭದ ವೇಳೆ ಯಾರಿಗೂ ಗುರುತು ಬಾರದಂತೆ, ಪುರುಷರ ಧಿರಿಸನ್ನು ಹಾಕಿಕೊಂಡು, ಕೈಯಲ್ಲಿ ಆ್ಯಸಿಡ್ ಬಾಟಲಿಯನ್ನು ಹಿಡಿದುಕೊಂಡಿದ್ದಾಳೆ. ಇದೇ ವೇಳೆ ವಿದ್ಯುತ್‌ ಕಡಿತಗೊಂಡಿದ್ದು, ಯುವತಿ ಯುವಕನ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾಳೆ.

ಕೃತ್ಯದ ಪರಿಣಾಮ ವರ, ವಧು ಸೇರಿದಂತೆ 10 ಮಂದಿ ಅತಿಥಿಗಳು ಗಾಯಗೊಂಡಿದ್ದಾರೆ.  ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು 12 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಯುವಕನ ಪ್ರಿಯತಮೆ ಎನ್ನುವುದು ತಿಳಿದು ಬಂದಿದೆ. ಮಾಜಿ ಪ್ರಿಯಕರ ಬೇರೆ ಮದುವೆ ಆದ ಕಾರಣ ಈ ಕೃತ್ಯ ಎಸೆಗಿದ್ದಾಳೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

ತಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಕಂಪೆನಿಯಿಂದ ಯುವತಿ ಆ್ಯಸಿಡ್ ನ್ನು ಕದ್ದು ಅದನ್ನೇ ಕೃತ್ಯಕ್ಕೆ ಬಳಸಿದ್ದಾರೆ. ಸದ್ಯ ಯುವತಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಳೆ ಪೊಲೀಸರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next