Advertisement

Chhattisgarh;ಮನೆಯಿಂದ ಹೊರಗೆಳೆದು ವ್ಯಕ್ತಿಯನ್ನು ಕೊಂದ ನಕ್ಸಲರು!

12:03 AM Jun 04, 2024 | Team Udayavani |

ನಾರಾಯಣಪುರ: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂಬ ಶಂಕೆ ಮೇರೆಗೆ ನಕ್ಸಲರು, 45 ವರ್ಷದ ವ್ಯಕ್ತಿಯನ್ನು ಮನೆಯಿಂದ ಹೊರಗೆಳೆದು ಕೊಂದ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ. ಶಾಲುರಾಮ್‌ ಪೊತೈ ಅವರು ರವಿವಾರ ರಾತ್ರಿ ಮಾಸ್ಪುರ ಗ್ರಾಮದ ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದರು. ಅಲ್ಲಿಗೆ ನುಗ್ಗಿದ 15-20 ನಕ್ಸಲರು, ಮನೆಯಿಂದ ಪೊತೈ ಅವರನ್ನು ಹೊರಗೆಳೆದು, ಬರ್ಬರವಾಗಿ ಕೊಂದಿದ್ದಾರೆ.

Advertisement

ಪೊಲೀಸರ ಜತೆ ಪೊತೈ ಸಂಪರ್ಕವಿರಲಿಲ್ಲ. ಈ ಭಾಗದಲ್ಲಿ ನಡೆಯುತ್ತಿರುವ ಪ್ರಗತಿ ಕಾಮಗಾರಿಗಳನ್ನು ನಕ್ಸಲರು ವಿರೋಧಿಸಿದ್ದರು. ಅದನ್ನು ತಡೆಯಲು ಅವರು ಪೊತೈನನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next