Advertisement

Mangaluru ಚೆಕ್‌ ಬೌನ್ಸ್‌: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

08:19 PM Jan 20, 2024 | Team Udayavani |

ಮಂಗಳೂರು: ಚೆಕ್‌ಬೌನ್ಸ್‌ ಪ್ರಕರಣದ ಆರೋಪಿ, ಕಂಕನಾಡಿ ಕುಂಟಾಲ್‌ ಗುಡ್ಡೆಯ ಪುಷ್ಪರಾಜ್‌ (54) ಎಂಬಾತನನ್ನು ಜ.18ರಂದು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಆರೋಪಿಯು ದ.ಕ. ಜಿಲ್ಲಾ ಕೋಳಿ ಸಾಕಣೆದಾರರ ವಿವಿಧೋದ್ದೇಶ ಸಹಕಾರಿ ಸಂಘದಿಂದ ಪಡೆದಿದ್ದ ಸಾಲ ಮರುಪಾವತಿಗಾಗಿ ನೀಡಿದ್ದ 95,321 ರೂ. ಮೊತ್ತದ ಚೆಕ್‌ ಅಮಾನ್ಯಗೊಂಡಿತ್ತು.

ಅನಂತರ ಕಾಲಾವಕಾಶ ನೀಡಿದರೂ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ವಾರಂಟ್‌ ಜಾರಿಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next