Advertisement

Chennapattana: ಹೈಕಮಾಂಡ್‌ ಕರೆ, ಸಿಪಿವೈ ದಿಲ್ಲಿಗೆ ಸಮಾನ ಮನಸ್ಕರ ಸಭೆ ರದ್ದು

01:09 AM Aug 12, 2024 | Team Udayavani |

ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ವಿಚಾರಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಮತ್ತು ಜೆಡಿಎಸ್‌ ನಡುವಿನ ಶೀತಲ ಸಮರಕ್ಕೆ ಅಂತ್ಯವಾಡಲು ಬಿಜೆಪಿ ಹೈಕಮಾಂಡ್‌ ದಿಲ್ಲಿಗೆ ಬರುವಂತೆ ಯೋಗೇಶ್ವರ್‌ಗೆ ಕರೆ ನೀಡಿದ ಬೆನ್ನಲ್ಲೇ, ರವಿವಾರ (ಆ.11) ನಡೆಯಬೇಕಿದ್ದ ಸಮಾನ ಮನಸ್ಕರ ಸಭೆ ರದ್ದುಪಡಿಸಿ ಸಂಜೆ ದಿಲ್ಲಿಗೆ ತೆರಳಿದರು.

Advertisement

ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಪ್ರಮುಖ ನಾಯಕರನ್ನು ಭೇಟಿ ಆಗಲಿದ್ದಾರೆ. ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಮತ್ತು ರಾಜ್ಯದ ಕೆಲವು ಬಿಜೆಪಿ ನಾಯಕರು ಈ ವೇಳೆ ಹಾಜರಿರಲಿದ್ದಾರೆ ಎನ್ನಲಾಗುತ್ತಿದೆ. ಚನ್ನಪಟ್ಟಣ ಉಪಚುನಾವಣೆ ಪರಿಸ್ಥಿತಿ, ಇನ್ನಿತರ ರಾಜಕೀಯ ಬೆಳವಣಿಗೆ ಬಗ್ಗೆ ಯೋಗೇಶ್ವರ್‌ ಜತೆ ಚರ್ಚಿಸಿ, ಎನ್‌ಡಿಎ ಅಭ್ಯರ್ಥಿ ವಿಚಾರವಾಗಿ ಗೊಂದಲ ನಿವಾರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಖೀಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಜೆಡಿಎಸ್‌ನಲ್ಲಿ ಒತ್ತಡ ಕೇಳಿ ಬರುತ್ತಿದೆ. ನಿಖೀಲ್‌ ಸ್ಪರ್ಧಿಸುವುದಾದರೆ ಯೋಗೇಶ್ವರ್‌ ಬೆಂಬಲದೊಂದಿಗೆ ಸ್ಪರ್ಧಿಸಬೇಕು ಎಂಬುದು ಕುಮಾರಸ್ವಾಮಿ ಅಜೆಂಡಾ. ಇದಕ್ಕಾಗಿ ವರಿಷ್ಠರ ಮೂಲಕ ಯೋಗೇಶ್ವರ್‌ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next