ಚೆನ್ನೈ : ಇಲ್ಲಿನ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ 5ವಿಕೆಟ್ ಜಯ ಸಾಧಿಸಿದೆ.
ಚೆನ್ನೈ 13 ನೇ ಪಂದ್ಯದಲ್ಲಿ 7 ನೇ ಜಯ ತನ್ನದಾಗಿಸಿಕೊಂಡು ಪ್ಲೇ ಆಫ್ ಪ್ರವೇಶಿಸುವ ರೇಸ್ ನಲ್ಲಿದೆ. ರಾಜಸ್ಥಾನ್ 12 ನೇ ಪಂದ್ಯದಲ್ಲಿ 4 ನೇ ಸೋಲು ಅನುಭವಿಸಿತಾದರೂ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿಯೇ ಇದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ 5 ವಿಕೆಟ್ ನಷ್ಟಕ್ಕೆ 141 ರನ್ ಮಾತ್ರ ಗಳಿಸಿತು. ಯಶಸ್ವಿ ಜೈಸ್ವಾಲ್ 24, ಜೋಸ್ ಬಟ್ಲರ್ 21, ಸ್ಯಾಮ್ಸನ್ 15, ಧ್ರುವ್ ಜುರೆಲ್ 28 ರನ್ ಗಳಿಸಿದರು. ರಿಯಾನ್ ಪರಾಗ್ ಔಟಾಗದೆ 47 ರನ್ ಗಳಿಸಿದರು. ಬಿಗಿ ದಾಳಿ ನಡೆಸಿದ ಸಿಮರ್ಜೀತ್ ಸಿಂಗ್ 3 ವಿಕೆಟ್ ಕಿತ್ತು ಗಮನ ಸೆಳೆದರು. ತುಷಾರ್ ದೇಶಪಾಂಡೆ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಚೆನ್ನೈ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ145 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು. ರಚಿನ್ ರವೀಂದ್ರ 27 ,ನಾಯಕ ರುತುರಾಜ್ ಗಾಯಕ್ವಾಡ್ 42 ರನ್ ಗಳಿಸಿ ಔಟಾಗದೆ ಉಳಿದರು. 22 ರನ್ ಗಳಿಸಿದ್ದ ಡೇರಿಲ್ ಮಿಚೆಲ್ ಅವರನ್ನು ಯಜುವೇಂದ್ರ ಚಾಹಲ್ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು. ಮೊಯಿನ್ ಅಲಿ 10, ಶಿವಂ ದುಬೆ 18 ರನ್ ಗಳಿಸಿ ಔಟಾದರು. ಜಡೇಜ 5 ರನ್ ಗಳಿಸಿದ್ದ ವೇಳೆ Obstructing the field ಮೂಲಕ ಔಟಾದರು.
ಸಮೀರ್ ರಿಜ್ವಿ ಔಟಾಗದೆ 15 ರನ್ ಗಳಿಸಿದರು. ಆರ್. ಅಶ್ವಿನ್ 2 , ಬರ್ಗರ್ 1 ವಿಕೆಟ್ ಪಡೆದರು.
ಆರ್ ಸಿಬಿಯೊಂದಿಗೆ ಮೇ 18 ರಂದು ಬೆಂಗಳೂರಿನಲ್ಲಿ ಚೆನ್ನೈ ಹಣಾಹಣಿ ನಡೆಸಲಿದೆ.