Advertisement

ಸುರೇಶ್‌ ರೈನಾ ಏಕೆ ಬೇಡವಾದರು? ಕಾರಣ ನೀಡಿದ ಚೆನ್ನೈ ಸಿಇಒ

11:16 PM Feb 14, 2022 | Team Udayavani |

ಚೆನ್ನೈ: ಮೆಗಾ ಹರಾಜಿನ ಅಚ್ಚರಿ ಹಾಗೂ ಆಘಾತಕಾರಿ ಸುದ್ದಿಯೆಂದರೆ, ಐಪಿಎಲ್‌ ಹೀರೋ ಸುರೇಶ್‌ ರೈನಾ “ಅನ್‌ಸೋಲ್ಡ್‌’ ಆದದ್ದು. ಎರಡು ಕೋಟಿ ರೂ. ಮೂಲ ಬೆಲೆಯ ಆಟಗಾರನನ್ನು ಚೆನ್ನೈ ಕೂಡ ಖರೀದಿಸಲು ಮುಂದಾಗಲಿಲ್ಲ. ಇದರೊಂದಿಗೆ ಅವರ ಐಪಿಎಲ್‌ ಜೈತ್ರಯಾತ್ರೆ ಬಹುತೇಕ ಕೊನೆಗೊಂಡಂತಾಗಿದೆ.

Advertisement

ಸುರೇಶ್‌ ರೈನಾ ಏಕೆ ಬೇಡವಾದರು ಎಂಬ ಕುರಿತು ಚೆನ್ನೈ ಸಿಇಒ ಕಾಶಿ ವಿಶ್ವನಾಥನ್‌ ಹೇಳಿಕೆಯೊಂದನ್ನು ನೀಡಿದ್ದಾರೆ. “ರೈನಾ ನಮ್ಮ ತಂಡದ ಅತ್ಯಂತ ಯಶಸ್ವಿ ಹಾಗೂ ಸ್ಥಿರ ಪ್ರದರ್ಶನ ನೀಡಿದ ಆಟಗಾರ. ಅವರನ್ನು ಖರೀದಿಸದಿದ್ದುದು ನಿಜಕ್ಕೂ ಒಂದು ಕಠಿನ ನಿರ್ಧಾರ. ಮೆಗಾ ಹರಾಜಿನ ವೇಳೆ ನಾವು ತಂಡದ ಸಂಯೋಜನೆ, ಆಟಗಾರರ ಫಾರ್ಮ್ ಹಾಗೂ ತಂಡವೊಂದು ಯಾವ ರೀತಿ ಇರಬೇಕೆಂಬ ಕುರಿತಾಗಿ ಕೈಗೊಂಡ ನಿರ್ಧಾರಗಳಿಗೆ ರೈನಾ ಹೊಂದಿಕೊಳ್ಳುತ್ತಿರಲಿಲ್ಲ’ ಎಂದು ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಕಾರಣ ನೀಡಿದರು.

ಇದನ್ನೂ ಓದಿ:ಸೇಂಟ್‌ ಪೀಟರ್ಬರ್ಗ್‌ ಟೆನಿಸ್‌: ಕೊಂಟಾವೀಟ್‌ ಚಾಂಪಿಯನ್‌

ಐಪಿಎಲ್‌ ಇತಿಹಾಸದಲ್ಲಿ 5 ಸಾವಿರ ರನ್‌ ಪೇರಿಸಿದ ಮೊದಲ ಆಟಗಾರ, ಚೆನ್ನೈ ಪರ ಅತ್ಯಧಿಕ ರನ್‌, ಅತ್ಯಧಿಕ ಅರ್ಧ ಶತಕ, ಅತ್ಯಧಿಕ ಸಿಕ್ಸರ್‌ ಬಾರಿಸಿದ ಹೆಗ್ಗಳಿಕೆ ಸುರೇಶ್‌ ರೈನಾ ಅವರದು. ಆದರೆ ವೈಯಕ್ತಿಕ ಕಾರಣಗಳಿಂದ ಕಳೆದ ಯುಎಇ ಆವೃತ್ತಿಯನ್ನು ತ್ಯಜಿಸಿ ಭಾರತಕ್ಕೆ ವಾಪಸಾದ ಬಳಿಕ ರೈನಾ ಮೂಲೆಗುಂಪಾಗಬೇಕಾಯಿತು. ಜತೆಗೆ ಅವರ ಫಾರ್ಮ್ ಕೂಡ ಕೈಕೊಟ್ಟಿತ್ತು. ಪರಿಣಾಮ, ಅನ್‌ಸೋಲ್ಡ್‌!

Advertisement

Udayavani is now on Telegram. Click here to join our channel and stay updated with the latest news.

Next