Advertisement

ಶಶಿಕಲಾ ವಜಾ ಎತ್ತಿ ಹಿಡಿದ ಮದ್ರಾಸ್‌ ಹೈಕೋರ್ಟ್‌

08:21 PM Apr 11, 2022 | Team Udayavani |

ಚೆನ್ನೈ: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ನಟರಾಜನ್‌ ಅವರನ್ನು ವಜಾ ಮಾಡಿದ್ದು ಸರಿ ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ತೀರ್ಪು ನೀಡಿದೆ.

Advertisement

ಇದರಿಂದಾಗಿ ಎಐಎಡಿಎಂಕೆ ಮೂಲಕ ಮತ್ತೊಮ್ಮೆ ಸಕ್ರಿಯ ರಾಜಕಾರಣ ಪ್ರವೇಶ ಮಾಡುವ ದಿ.ಜಯಲಲಿತಾ ಆಪೆ¤ಗೆ ಹಿನ್ನಡೆ ಉಂಟಾಗಿದೆ.

2017ರ ಫೆಬ್ರವರಿಯಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಶಶಿಕಲಾ ಅವರು ಜೈಲು ಶಿಕ್ಷೆ ಅನುಭವಿಸುವುದಕ್ಕಿಂತ ಮೊದಲು ಎಐಎಡಿಎಂಕೆಯ ಮುಖಂಡರಾದ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ.ಪನ್ನೀರ್‌ಸೆಲ್ವಂ ಅವರು ಶಶಿಕಲಾ ನಟರಾಜನ್‌ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಿದ್ದರು. ಅದನ್ನು ಪ್ರಶ್ನಿಸಿ ಶಶಿಕಲಾ ನ್ಯಾಯಾಂಗ ಹೋರಾಟ ನಡೆಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next