Advertisement

ಇದು ಕರಿಯಪ್ಪನ ಕೆಮ್ಮಿನ ಕೆಮಿಸ್ಟ್ರಿ!

09:28 AM Feb 14, 2019 | Team Udayavani |

ಕೆಮಿಸ್ಟ್ರಿ ಆಫ್ ಕರಿಯಪ್ಪ ಟ್ರೈಲರ್ ನೋಡಿದವರಿಗೆಲ್ಲ ಇದೊಂದು ಹೊಸಾ ಅಲೆಯ, ಭಿನ್ನ ಆಲೋಚನೆಯ ಚಿತ್ರ ಎಂಬುದು ಮನದಟ್ಟಾಗಿದೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದಂಥಾ, ಬಂದರೂ ಗಮನ ಹರಿಸದಂಥಾ ಕಥೆಯನ್ನ ಈ ಚಿತ್ರ ಒಳಗೊಂಡಿರೋದೂ ಅಷ್ಟೇ ಸತ್ಯ. ನಿರ್ದೇಶಕ ಕುಮಾರ್ ಇದೀ ಕಥೆಯನ್ನು, ಅದರೊಳಗಿನ ಪಾತ್ರಗಳನ್ನು ಅಷ್ಟೇ ಸೂಕ್ಷ್ಮ ಮನಸ್ಥಿತಿಯಿಂದಲೇ ರೂಪಿಸಿದ್ದಾರೆ.

Advertisement

ಸಣ್ಣ ಸಣ್ಣ ವಿಚಾರಗಳನ್ನೂ ಪ್ರಾಧಾನ್ಯತೆ ಇರುವಂತೆ, ಪ್ರೇಕ್ಷಕರನ್ನು ಕಾಡುವಂತೆ ವಿಭಿನ್ನ ಶೈಲಿಯಲ್ಲಿ ಈ ಚಿತ್ರವನ್ನು ಸಿದ್ಧಗೊಳಿಸಲಾಗಿದೆಯಂತೆ. ಅದರಲ್ಲಿ ಕರಿಯಪ್ಪ ಪಾತ್ರಧಾರಿ ತಬಲಾ ನಾಣಿಯ ಕೆಮ್ಮೂ ಕೂಡಾ ಸೇರಿಕೊಂಡಿದೆ.

ಈಗಾಗಲೇ ತಬಲಾ ನಾಣಿಯ ಇಮೇಜು ಈ ಸಿನಿಮಾ ಮೂಲಕ ಬದಲಾಗಲಿದೆ ಎಂಬಂಥಾ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದುವರೆಗೂ ಒಂದು ಥರದ ಇಮೇಜಿಗೆ ನಾಣಿಯವರನ್ನು ಸೀಮಿತಗೊಳಿಸಲಾಗಿತ್ತಲ್ಲಾ? ಕರಿಯಪ್ಪನಾಗಿ ಅವರದನ್ನು ಮೀರಿಕೊಂಡಿದ್ದಾರೆ. ಇದರಲ್ಲಿ ಅವರ ಪ್ರತೀ ಹಾವ ಭಾವಗಳೂ ವಿಶಿಷ್ಟವಾಗಿವೆ. ಇಲ್ಲಿ ಅವರ ಕೆಮ್ಮೂ ಕೂಡಾ ಒಂದು ಪಾತ್ರವಾಗುವಂತೆ ನಿರ್ದೇಶಕರು ಕುಸುರಿಯಂಥಾ ಕಲೆಗಾರಿಕೆ ತೋರಿಸಿದ್ದಾರಂತೆ. 

Advertisement

Udayavani is now on Telegram. Click here to join our channel and stay updated with the latest news.

Next