Advertisement

ಗುಡಿಬಂಡೆ: ಕೆಮಿಕಲ್ ಮಿಶ್ರಿತ ಬಣ್ಣವಾದ ಕೆರೆ ನೀರು

03:15 PM Oct 09, 2022 | Team Udayavani |

ಗುಡಿಬಂಡೆ: ಪಟ್ಟಣದ ಅಮಾನಿಬೈರಸಾಗರ ಕೆರೆ ನೀರು ದಿನದಿಂದ ದಿನಕ್ಕೆ ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ತಿರುಗುತ್ತಿದ್ದು, ನೀರಿಗೆ ಯಾರಾದರೂ ಕೆಮಿಕಲ್ ಮಿಶ್ರಣ ಮಾಡಿದ್ದಾರೆಯೇ ಎಂದು ಸಾರ್ವಜನಿಕರಲ್ಲಿ ಅನುಮಾನಗಳು ಎಡ ಮಾಡಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ, ಭಾರತದ ಭೂಪಟವನ್ನು ಹೋಲುವ ಅಮಾನಿಬೈರಸಾಗರ ಕೆರೆ 2022ನೇ ವರ್ಷದಲ್ಲಿ  ನಿಲ್ಲದೇ ಕೋಡಿ ಹರಿಯುತ್ತಿದ್ದು, ಇದೇ ಕೆರೆಯಲ್ಲಿ ಜೀವ ಜಲಚರಗಳು ವಾಸಸ್ಥಾನವಾಗಿದ್ದು, ಇದೇ ಕೆರೆಯ ನೀರನ್ನು ಸುಮಾರು ಹಳ್ಳಿಗೆ ಕುಡಿಯುವ ನೀರು ಬಳಕೆಗೆ ಬಳಸಲು ಯೋಜನೆ ಸಹ ಸಿದ್ದಪಡಿಸುತ್ತಿದೆ, ಆದರೆ ಈ ಕೆರೆಯ ನೀರು ಕಳೆದ ಶನಿವಾರ ರಾತ್ರಿಯಿಂದ ಬಣ್ಣ ಬದಲಾವಣೆಯಾಗುತ್ತಿದ್ದು, ಭಾನುವಾರ ಬೆಳಿಗ್ಗೆ ಕೆರೆಯ ನೀರು ಕೆಮಿಕಲ್ ಮಿಶ್ರಣದ ಬಣ್ಣದ ರೂಪಕ್ಕೆ ತಿರುಗಿದ್ದು, ಬೆಳಿಗಿನ ಜಾವ ವಾಯು ವಿವಹಾರಕ್ಕೆ ತೆರಳಿದ್ದು, ಸಾರ್ವಜನಿಕರು ಕೆರೆಯ ನೀರಿನ ಬಣ್ಣ ಬದಲಾಗಿರುವುದನ್ನು ಕಂಡು, ಕೆಮಿಕಲ್ ಮಿಶ್ರಣವಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ, ಹೆಚ್ಚಿನ ಅನಾಹುತ ಸಂಬಂವಿಸುವ ಮೊದಲೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಹಿಂದೆ ಗುಡಿಬಂಡೆ ಪಟ್ಟಣದ ಹತ್ತಿರದ ವಾಟದಹೊಸಹಳ್ಳಿ ಕೆರೆಗೆ ಕೆಮಿಕಲ್ ಮಿಶ್ರಣ ಮಾಡಲು ಬಂದಿದ್ದ ಟ್ಯಾಂಕರ್‌ಅನ್ನು ಅಲ್ಲಿಯ ಸುತ್ತಮುತ್ತಲ ಗ್ರಾಮ ಸ್ಥರು ಹಿಡಿದು ಗುಡಿಬಂಡೆ ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಘಟನೆ ನಡೆದಿದು, ಈ ಘಟನೆ ಮರೆ ಮಾಚುವಷ್ಟರಲ್ಲೇ ಅಮಾನಿಬೈರಸಾಗರ ಕೆರೆ ನೀರು ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಬದಲಾಗುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಜಿ.ಕೆ.ಜಗನ್ನಾಥ್, ಬಿ.ಜೆ.ಪಿ. ಮುಖಂಡ ಹೇಳಿಕೆ: ಇತಿಹಾಸ ಪ್ರಸಿದ್ದ ಅಮಾನಿಬೈರಸಾಗರ ಕೆರೆ ನೀರಿನ ಬಣ್ಣ ಕೆಮಿಕಲ್ ಮಿಶ್ರಣದಂತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next