Advertisement

‘chef chidambara’ ಮುಖದಲ್ಲಿ ನಗು; ಎರಡನೇ ವಾರವೂ ಅಡುಗೆ ಘಮ

02:38 PM Jun 23, 2024 | Team Udayavani |

“ಶೆಫ್ ಚಿದಂಬರ’ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಚಿತ್ರತಂಡ ಖುಷಿಯಾಗಿದೆ. ಅನಿರುದ್ಧ್ ನಾಯಕರಾಗಿರುವ ಈ ಚಿತ್ರವನ್ನು ಎಂ.ಆನಂದರಾಜ್‌ ನಿರ್ದೇಶಿಸಿದ್ದಾರೆ. ದಮ್ತಿ ಪಿಕ್ಚರ್ಸ್‌ ಲಾಂಛನದಲ್ಲಿ ರೂಪ ಡಿ.ಎನ್‌ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. “ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎನ್ನುವುದು ತಂಡದ ಮಾತು.

Advertisement

ತನ್ನದೇ ಆದ ಒಂದು ಹೋಟೆಲ್‌ ಮಾಡಬೇಕು, ಆ ಮೂಲಕ ರುಚಿ ರುಚಿಯಾದ ಅಡುಗೆಯನ್ನು ಗ್ರಾಹಕರಿಗೆ ನೀಡಬೇಕು ಎಂದು ಕನಸು ಕಂಡು ಅದಕ್ಕಾಗಿ ಶ್ರಮಿಸುವವನು ಚಿದಂಬರ. ಇದಕ್ಕಾಗಿ ತನ್ನದೇ ಹಾದಿಯಲ್ಲಿ ಸಾಗುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಶಾಕ್‌ ಒಂದು ಎದುರಾಗುತ್ತದೆ. ಏನೋ ಆಗಬಹುದು ಎಂದುಕೊಂಡವನಿಗೆ ಇನ್ನೇನೋ ಆಗಿ, ದೊಡ್ಡ ತಲೆಬಿಸಿಯೇ ಎದುರಾಗುತ್ತದೆ. ಅಲ್ಲಿಂದ ಮತ್ತೂಂದು ಆಯಾಮ… ಇಂತಹ ಕಥಾಹಂದರದೊಂದಿಗೆ ಸಿನಿಮಾ ಮೂಡಿಬಂದಿದೆ. ಚಿದಂಬರ ಎಂಬ ಶೆಫ್ನ ಜೀವನದಲ್ಲಿ ನಡೆಯುವ ಘಟನೆಗಳೇ ಈ ಸಿನಿಮಾದ ಹೈಲೈಟ್‌.

ನಿರ್ದೇಶಕ ಆನಂದ್‌ ರಾಜ್‌, ಒಂದಷ್ಟು ಕುತೂಹಲಕಾರಿ ಅಂಶಗಳೊಂದಿಗೆ ಈ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ತಾರಾಬಳಗದಲ್ಲಿ ಅನಿರುದ್ಧ್, ನಿಧಿ, ರಚೆಲ್‌, ಶರತ್‌ ಲೋಹಿತಾಶ್ವ, ಕೆ.ಎಸ್‌ ಶ್ರೀಧರ್‌, ಶಿವಮಣಿ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next