Advertisement
ಶಿರಡಿ ಸಾಯಿಬಾಬಾ ದೇವಸ್ಥಾನ ಹತ್ತಿರ ನಿರ್ಮಾಣ ಹಂತದ ಮಾರುತಿ ಗುಡಿ ಬಳಿ ನಿವಾಸಿ ಸಾವಿತ್ರಿ ಮುದ್ದೇಬಿಹಾಳ ಅವರಿಗೆ ಮೊದಲು ಕಾಣಿಸಿಕೊಂಡಿದೆ. ಇವರು ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದ ವೇಳೆ ನೃಪತುಂಗ ಬೆಟ್ಟದ ಅರಣ್ಯ ಪ್ರದೇಶದಿಂದ ಜಿಗಿಯುತ್ತ ಬಂದು ಹಂದಿ ಹಿಡಿದುಕೊಂಡು ಹೋಗಿದೆ. ಇದನ್ನು ನೋಡಿದ ಸಾವಿತ್ರಿ ಅವರು ಗಾಬರಿಗೊಂಡು ಮನೆಯೊಳಗೆ ಹೋಗಿದ್ದಾರೆ. ಚಿರತೆ ಅಲ್ಲಿಯೇ ಸಮೀಪದಲ್ಲಿ ಗಿಡ ಏರಿ ಕುಳಿತಿದೆ. ಇದನ್ನು ನೋಡಿದ ಅಲ್ಲಿನ ಕೆಲವು ಮಹಿಳೆಯರು, ಮಕ್ಕಳು ಹಾಗೂ ಪುರುಷರು ಭಯಗೊಂಡು ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡಿದ್ದಾರೆ. ತಕ್ಷಣ ಅಶೋಕ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Related Articles
Advertisement
ಪಕ್ಕದಲ್ಲಿಯೇ ಹಾಸ್ಟೆಲ್ ಸಹ ಇದೆ. ಇಲ್ಲಿ 60 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ತರಗತಿಗಳನ್ನು ರದ್ದು ಪಡಿಸುವ ಬಗ್ಗೆ ನಮಗೆ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಆದರೆ ಬೆಟ್ಟದ ಸುತ್ತಮುತ್ತಲಿನ ವಿದ್ಯಾರ್ಥಿಗಳಾದರೂ ಶಾಲೆಗೆ ಬಂದಿಲ್ಲ. ಸುತ್ತಲಿನ ಹಳ್ಳಿಯ ಕೆಲ ವಿದ್ಯಾರ್ಥಿಗಳು ಮಾತ್ರ ಸೋಮವಾರ ಶಾಲೆಗೆ ಬಂದಿದ್ದಾರೆ ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಆರ್. ವೈ. ಗೋಕಾಕ ಸುದ್ದಿಗಾರರಿಗೆ ತಿಳಿಸಿದರು.
10-15 ದಿನಗಳಿಂದ ಇಲ್ಲಿಯೇ ಇದೆಯೇ?
ನೃಪತುಂಗ ಬೆಟ್ಟ ಸುತ್ತಮುತ್ತ ಕಾಣಿಸಿಕೊಂಡಿರುವ ಚಿರತೆ ಕಳೆದ 10-15 ದಿನಗಳಿಂದ ಇಲ್ಲಿನ ಪ್ರದೇಶದಲ್ಲಿಯೇ ವಾಸಿಸುತ್ತಿದೆಯೇ ಎಂಬ ಸಂದೇಹ ಜನರಲ್ಲಿ ಕಾಡುತ್ತಿದೆ. ಸಂಜೆಯಾದರೆ ಸಾಕು ಚಿರತೆಯು ಗಿಡ, ಪೊದೆಗಳಿಂದ ಹೊರಗೆ ಬಂದು ನಾಯಿ, ಹಂದಿಗಳನ್ನು ಹಿಡಿದುಕೊಂಡು ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರ ಕಣ್ಣಿಗೆ ಅದು ಕಾಣಿಸಿಕೊಂಡಿದೆ. ಯಾರು ಅದರತ್ತ ಚಿತ್ತ ಹರಿಸಿರಲಿಲ್ಲ ಎಂದು ಶಿರಡಿನಗರದ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದರು.