Advertisement

ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಗುಟ್ಟಾ ರಸಮಂಜರಿ

03:45 AM Jan 16, 2017 | |

ಮುಂಬೈ: ಹಲವು ಅಡೆತಡೆ ಹಾಗೂ ವಿಳಂಬಗಳ ಹೊರತಾಗಿಯೂ, ಸಹಸ್ರಾರು ಸಂಖ್ಯೆಯ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಫ್ರೆಂಚ್‌ ಸಂಗೀತಕಾರ ಡೇವಿಡ್‌ ಗುಟ್ಟಾ ಅವರ ರಸಮಂಜರಿ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ಬಿಕೆಸಿಯ ಜಿಯೋ ಗಾರ್ಡನ್‌ನಲ್ಲಿ ನಡೆಯಿತು. 

Advertisement

“ಇದೊಂದು ಅಪರೂಪದ ಪಯಣ. ಕೊನೆಗೂ ನಾವು ಇದನ್ನು ಪೂರ್ಣಗೊಳಿಸಿ ದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂಚಿತವಾ ಗಿಯೇ ಕಾರ್ಯಕ್ರಮಕ್ಕೆ ಆಗಮಿಸಿದ ನಿಮ್ಮ ಸಹನೆಗೆ ಧನ್ಯವಾದಗಳು’ ಎಂದು ಕಾರ್ಯಕ್ರಮ ಆರಂಭಕ್ಕೂ ಮುನ್ನ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿ ಗಳನ್ನುದ್ದೇಶಿಸಿ ಡೇವಿಡ್‌ ಗುಟ್ಟಾ ಮಾತನಾಡಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಪಾಲ್ಗೊಂಡಿದ್ದರು. 

ರಸಮಂಜರಿ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಆಯೋಜಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಮುಂಬೈ ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದ ಬಳಿಕ, ಬಿಕೆಸಿಯ ಜಿಯೋ ಗಾರ್ಡನ್‌ನಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತು. ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೀಡಿದ  ಗುಟ್ಟಾ ನಂತರ ಅದೇ ಸ್ಥಳದಲ್ಲಿ ಮತ್ತೂಮ್ಮೆ ಕಾರ್ಯಕ್ರಮ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next