Advertisement

ಪರಿಶೀಲಿಸಿ ಕ್ರಮ: ಕುಮಾರಸ್ವಾಮಿ

01:20 AM Jan 24, 2019 | |

ಬೆಂಗಳೂರು: ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದ ಹಿನ್ನೆಲೆಯಲ್ಲಿ ಮೂರು ದಿನ ಶೋಕಾಚರಣೆಯಿದ್ದರೂ ಸಮಾಜ ಕಲ್ಯಾಣ ಇಲಾಖೆಯು ಸಂವಿಧಾನದ ಸಂಭಾಷಣೆ ನಡೆಸಿದ್ದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ‘ನನಗೆ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಸೂಚಿಸಿದೆ. ನಾನು ಫೋನ್‌ನಲ್ಲಿ ಮಾತನಾಡುವ ಹೊತ್ತಿಗೆ ಅವರು ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾಜಿ ಉಪರಾಷ್ಟ್ರಪತಿಗಳು ಭಾಷಣೆ ಮಾಡುತ್ತಿದ್ದರು. ಮುಂದಿನ ಸಂವಾದಗಳನ್ನು ಕೈ ಬಿಡುವುದಾಗಿ ಹೇಳಿದ್ದರು. ಕಾರ್ಯಕ್ರಮ ರದ್ದುಪಡಿಸಿರುವುದಾಗಿ ಮಧ್ಯಾಹ್ನ ನನಗೆ ಮಾಹಿತಿ ನೀಡಿದರು. ಒಂದೊಮ್ಮೆ ಮಧ್ಯಾಹ್ನದ ನಂತರವೂ ಸಂವಾದ ನಡೆಸಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next