Advertisement
ಸ್ಥಳಿಯರ ಅಹವಾಲುತೂಗುಸೇತುವೆಗೆ ನಿರ್ಮಾಣವಾಗುತ್ತಿರುವ ಸಂಪರ್ಕ ರಸ್ತೆಯ ಸಮೀಪದ ಸುಂದರ ಶೆಟ್ಟಿ ಅವರ ತೋಟದ 20ಕ್ಕೂ ಮಿಕ್ಕಿದ ಅಡಿಕೆ, ತೆಂಗಿನ ಗಿಡಗಳನ್ನು ಕಳೆದ ರಾತ್ರಿ ಕಿಡಿ ಗೇಡಿಗಳು ಕಡಿದು ಹಾನಿ ಮಾಡಿದ್ದು ಸುಂದರ ಅವರು ಸಚಿವರ ಬಳಿ ಅಳಲು ತೋಡಿಕೊಂಡರು. ಮೂಲರಪಟ್ಣದಿಂದ ಕೊಳತ್ತ ಮಜಲು ತನಕ ತಾತ್ಕಾಲಿಕ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಖಾಸಗಿ ಜಾಗದವರ ಜೊತೆ ಚರ್ಚಿಸಿ, ಅವರ ಕೃಷಿ ಭೂಮಿಗೆ ಹಾನಿಯಾಗದಂತೆ ನೋಡ ಲಾಗುವುದು. ತೂಗುಸೇತುವೆಯಲ್ಲಿ ಮಕ್ಕಳಿಗೆ ನಡೆದುಕೊಂಡು ಹೋಗಲು ಭಯಪಡುತ್ತಿದ್ದು, ಸುರಕ್ಷತೆ ದೃಷ್ಟಿ ಯಿಂದ ಹೋಂ ಗಾರ್ಡ್ಗಳನ್ನು ನಿಯೋಜಿಸಲಾಗುವುದು ಎಂದರು.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಹಳೇ ಸೇತುವೆ ದುರಸ್ತಿಗೆ ಸದ್ಯಕ್ಕೆ ಆರು ಕೋಟಿ ರೂ.ಗಳ ಅಗತ್ಯವಿದ್ದು, ಇಲ್ಲಿ ಮತ್ತೆ ಹೊಸ ಸೇತುವೆ ನಿರ್ಮಿಸಬೇಕೋ ಬೇಡವೋ ಎಂಬ ಬಗ್ಗೆ ಅ ಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸಚಿವ ಖಾದರ್