Advertisement

ಹಿಮತಪ್ಪಲಲ್ಲಿ ಚೇಸ್‌!

11:14 AM May 15, 2018 | |

ಅವಿನಾಶ್‌ ನರಸಿಂಹರಾಜು ಹಾಗೂ ರಾಧಿಕಾ ಚೇತನ್‌ ಅಭಿನಯದ “ಚೇಸ್‌’ ಚಿತ್ರದ ಬಗ್ಗೆ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಬರೆಯಲಾಗಿತ್ತು. ಈಗ ಹೊಸ ಸುದ್ದಿ ಅಂದರೆ, ಚಿತ್ರ ಬಹುತೇಕ ಚಿತ್ರೀಕರಣಗೊಂಡಿದೆ. ಇತ್ತೀಚೆಗೆ ಚಿತ್ರತಂಡ ಉತ್ತರ ಭಾರತಕ್ಕೆ ತೆರಳಿ, ಹಾಡಿನ ಚಿತ್ರೀಕರಣ ಮುಗಿಸಿಕೊಂಡು ಹಿಂದಿರುಗಿದೆ. ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಹರಿ ಆನಂದ್‌, ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೆಣೆದು ಸಿನಿಮಾ ಮಾಡಿದ್ದಾರೆ.

Advertisement

ಒಂದು ತನಿಖೆ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ಸಾಕಷ್ಟು ತಿರುವುಗಳಿವೆ. ಬೆಂಗಳೂರು ಮತ್ತು ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಹಾಡಿನ ಚಿತ್ರೀಕರಣಕ್ಕಾಗಿ, ಹಿಮದ ತಪ್ಪಲಲ್ಲಿ ನಡೆಸಿಕೊಂಡು ಹಿಂದಿರುಗಿದೆ. ಚಿತ್ರದ ಹೀರೋ ಅವಿನಾಶ್‌ ನರಸಿಂಹರಾಜು ಇಲ್ಲಿ ಸಿಸಿಬಿ ಕಾಪ್‌ ಆಗಿ ನಟಿಸುತ್ತಿದ್ದಾರೆ. ಅವರು ಮಾಡುತ್ತಿರುವ ಹೊಸತರಹದ ಪಾತ್ರವಿದು.

ಅವಿನಾಶ್‌ ನರಸಿಂಹರಾಜು ಇಲ್ಲಿ ಬರೀ ಕ್ಯಾಮೆರಾ ಮುಂದೆ ನಿಂತು ನಟನೆ ಮಾಡುತ್ತಿಲ್ಲ. ಅವರು, ಕಲಾ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ತೆರೆಯ ಮೇಲೆ ಕಾಣಿಸಿಕೊಳ್ಳುವ ಎಲ್ಲಾ ಪಾತ್ರಗಳಿಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ರಾಜೇಶ್‌ ನಟರಂಗ, ಶೀತಲ್‌ಶೆಟ್ಟಿ, ಅರವಿಂದ್‌ರಾವ್‌ ಸೇರಿದಂತೆ ಕಿರುತೆರೆಯ ಅನೇಕ ಕಲಾವಿದರು ನಟಿಸಿದ್ದಾರೆ.

ಇಲ್ಲಿ ಕಲಾವಿದರನ್ನು ಹೊರತುಪಡಿಸಿದರೆ, ಬಹುತೇಕ ತಂತ್ರಜ್ಞರಿಗೆ ಇದು ಹೊಸ ಅನುಭವ. ಚಿತ್ರಕ್ಕೆ ಅನಂತ್‌ಅರಸ್‌ ಅವರು ಛಾಯಾಗ್ರಹಣ ಮಾಡಿದರೆ, ಕಾರ್ತಿಕ್‌ ಆಚಾರ್ಯ ಸಂಗೀತ ನೀಡಿದ್ದಾರೆ. ಮುಂಬೈನಲ್ಲಿ ಕೆಲ ಸಿನಿಮಾಗಳಿಗೆ ಕೆಲಸ ಮಾಡಿರುವ ಕಾರ್ತಿಕ್‌ ಆಚಾರ್ಯ ಅವರಿಗೆ ಕನ್ನಡದಲ್ಲಿ “ಚೇಸ್‌’ ಮೊದಲ ಚಿತ್ರ.

ಇನ್ನು, ಈ ಚಿತ್ರಕ್ಕೆ ಮನೋಹರ್‌ ಸುವರ್ಣ ಮತ್ತು ಪ್ರಶಾಂತ್‌ ಶೆಟ್ಟಿ ನಿರ್ಮಾಪಕರು. ಜನಾರ್ಧನ್‌ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ಚಿತ್ರಕ್ಕಿದೆ. ಅದೇನೆ ಇರಲಿ, ಅವಿನಾಶ್‌ ನರಸಿಂಹರಾಜು ಅಭಿನಯದ ಒಂದಷ್ಟು ಚಿತ್ರಗಳು ಈ ವರ್ಷ ತೆರೆಗೆ ಬರಲು ಸಜ್ಜಾಗಿವೆ. ಅಂತೆಯೇ ರಾಧಿಕಾ ಚೇತನ್‌ ಅಭಿನಯದ ಮೂರು ಚಿತ್ರಗಳು ಈ ವರ್ಷದಲ್ಲಿ ತೆರೆಕಾಣುತ್ತಿವೆ ಎಂಬುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next