Advertisement

ಚಾರ್ಮಾಡಿ: ರಿಕ್ಷಾ ಬಾವಿಗೆ ಬಿದ್ದು ಮಗು ದಾರುಣ ಸಾವು

04:57 PM Jan 21, 2017 | Team Udayavani |

ಬೆಳ್ತಂಗಡಿ: ಇಲ್ಲಿನ ಚಾರ್ಮಾಡಿಯಲ್ಲಿ ನಿಲ್ಲಿಸಿದ್ದ ರಿಕ್ಷಾವೊಂದು ಏಕಾಏಕಿ ಚಲಿಸಿ ತೆರೆದ ಬಾವಿಗೆ ಬಿದ್ದು ಅದರಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಲಂದರ್‌ ಎನ್ನುವವರ ಮಗು ಕಲೀಲ್‌ ಎಂದು ತಿಳಿದು ಬಂದಿದೆ. 

Advertisement

ಅಂಗಳದಲ್ಲಿ  ರಿಕ್ಷಾ ನಿಲ್ಲಿಸಿದ್ದ ವೇಳೆ ಮಗು ಆಟವಾಡುತ್ತಿದ್ದು ಇಳಿಜಾರಿನಲ್ಲಿ ಏಕಾಏಕಿ ಮುಂದಕ್ಕೆ ಸಾಗಿದ ರಿಕ್ಷಾ ಬಾವಿಗೆ ಬಿದ್ದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ವರದಿಯಾಗಿದೆ. 

ಮಗುವಿನ ತಾಯಿ ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next