Advertisement

“ಚಾರ್ಲಿ’ಶಿವ ಇನ್ನಿಲ್ಲ

04:53 PM Mar 03, 2018 | |

ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಶಿವ (34) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. “ಚಾರ್ಲಿ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿಕೊಟ್ಟ ಶಿವ, “ಮಾಲ್ಗುಡಿ ಸ್ಪೆಷನ್‌’ ಎಂಬ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು.

Advertisement

ಜೊತೆಗೆ ಇನ್ನೊಂದು ಹೊಸ ಸಿನಿಮಾದ ಕೆಲಸದಲ್ಲೂ ತೊಡಗಿದ್ದರು.  ಬೆಳಗಾವಿ ಮೂಲದ ಶಿವ ಸಿನಿಮಾ ಆಸೆಯಿಂದ ಬೆಂಗಳೂರಿಗೆ ಬಂದು ನಿರ್ದೇಶಕರಾದ ಸೂರಿ ಹಾಗೂ ಯೋಗರಾಜ್‌ ಭಟ್‌ ತಂಡ ಸೇರಿಕೊಂಡಿದ್ದರು. ಸೂರಿಯವರ “ಜಾಕಿ’, “ಅಣ್ಣಾಬಾಂಡ್‌’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಶಿವ ಅವರು ಸ್ವತಂತ್ರ ನಿರ್ದೇಶಕರಾಗಿ “ಚಾರ್ಲಿ’ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ “ಮದರಂಗಿ’ ಕೃಷ್ಣ ನಾಯಕರಾಗಿದ್ದರು.

ಎರಡು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಶಿವ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಕ್ರಿಯೆ ಬೆಳಗಾವಿಯ ಹುಟ್ಟೂರಿನಲ್ಲಿ ನಡೆಯಿತು. ಇವರು ಪತ್ನಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next