Advertisement

ಇಂದಿನಿಂದ ಚಾರ್‌ಧಾಮ್‌ ಯಾತ್ರೆ ಆರಂಭ

11:22 PM Apr 21, 2023 | Team Udayavani |

ಡೆಹ್ರಾಡೂನ್‌: ಪ್ರಸಕ್ತ ಸಾಲಿನ ಚಾರ್‌ಧಾಮ್‌ ಯಾತ್ರೆ ಶನಿವಾರದಿಂದ ಶನಿವಾರದಿಂದ ಆರಂಭವಾಗಲಿದೆ. ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ದೇಗುಲಗಳು ಶನಿವಾರ ತೆರೆಯಲಿವೆ. ಕೇದರನಾಥ ದೇಗುಲವು ಏ.25ರಂದು ಮತ್ತು ಬದರಿನಾಥ ದೇಗುಲವು ಏ.27ರಂದು ತೆರೆಯಲಿದೆ.

Advertisement

ಇದೇ ವೇಳೆ ಉತ್ತರಾಖಂಡ ಮುಖ್ಯಮಂತ್ರಿ ಪುಶ್ಕರ್‌ ಸಿಂಗ್‌ ಧಾಮಿ ಅವರು ಚಾರ್‌ಧಾಮ್‌ ಯಾತ್ರೆಗೆ ದಿನದ ಆಧಾರದಲ್ಲಿ ಯಾತ್ರಿಗಳ ಸಂಖ್ಯೆ ಮೇಲೆ ವಿಧಿಸಿದ್ದ ಮಿತಿಯನ್ನು ಶುಕ್ರವಾರ ಹಿಂಪಡೆದಿದ್ದಾರೆ. ಈ ಬಗ್ಗೆ ಹಲವು ಒತ್ತಾಯಗಳು ವ್ಯಕ್ತವಾಗಿದ್ದವು.

ಬದರಿನಾಥ್‌ ಹೆದ್ದಾರಿ ಬಂದ್‌:
ಉತ್ತರಖಂಡದ ಬದರಿನಾಥ್‌ ರಾಷ್ಟ್ರೀಯ ಹೆದ್ದಾರಿಯ ಹನುಮಾನ್‌ ಚಟ್ಟಿಯಲ್ಲಿ ಹಿಮಪಾತ ಮತ್ತು ಮಳೆಯ ಕಾರಣ ಭೂಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಬದರಿನಾಥ್‌ ದೇಗುಲದಿಂದ 10 ಕಿ.ಮೀ. ದೂರದಲ್ಲಿರುವ ಹನುಮಾನ್‌ ಚಟ್ಟಿಯಲ್ಲಿ ಗಡಿ ರಸ್ತೆಗಳ ಸಂಸ್ಥೆಯು(ಬಿಆರ್‌ಒ) ಹೆದ್ದಾರಿ ಮೇಲೆ ಬಿದ್ದಿರುವ ಬಂಡೆ ಕಲ್ಲುಗಳು ಮತ್ತು ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ..

 

Advertisement

Udayavani is now on Telegram. Click here to join our channel and stay updated with the latest news.

Next