Advertisement

ಚನ್ನಪಟ್ಟಣ: ರೈತರ ನಿದ್ದೆಗೆಡಿಸಿದ್ದ ಮತ್ತೊಂದು ಪುಂಡಾನೆ ಸೆರೆ

01:08 PM Jun 15, 2023 | Team Udayavani |

ರಾಮನಗರ: ರೈತರ ನಿದ್ದೆಗೆಡಿಸಿದ್ದ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಸೆರೆ ಹಿಡಿಲಾಗಿದೆ.

Advertisement

ಅಭಿಮನ್ಯು ಮತ್ತು ತಂಡವು ಪುಂಡಾನೆ ಸೆರೆಹಿಡಿದಿದೆ. ಕಳೆದ ಐದು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಪುಂಡಾನೆ ಕೊನೆಗೂ ಸೆರೆ ಹಿಡಿಲಾಗಿತ್ತು.

ಇದನ್ನೂ ಓದಿ:ಸಿಂಗಾಪುರದಲ್ಲಿ ಹನಿಮೂನ್:‌ ಪತ್ನಿಯೊಂದಿಗಿನ ಸುಂದರ ಫೋಟೋ ಹಂಚಿಕೊಂಡ ನಟ ಆಶಿಶ್‌ ವಿದ್ಯಾರ್ಥಿ

ಚನ್ನಪಟ್ಟಣ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಇದೀಗ ಒಂದೊಂದೇ ಆನೆಯನ್ನ ಸೆರೆಹಿಡಿದು ಅರಣ್ಯ ಇಲಾಖೆ ಕಾಡಿಗಟ್ಟುತ್ತಿದೆ. ಇತ್ತೀಚೆಗಷ್ಟೇ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next