Advertisement

ಆರ್ಥಿಕ ಕುಸಿತದಿಂದ ಗಮನ ಬೇರೆಡೆ ಸೆಳೆಯಲು ಚಂದ್ರಯಾನದ ನಾಟಕ!

10:51 AM Sep 07, 2019 | Sriram |

ಕೋಲ್ಕತಾ: ಆರ್ಥಿಕ ಕುಸಿತದಿಂದ ದೇಶ ಕಂಗಾಲಾಗಿದ್ದು, ಈ ವೇಳೆ ಜನರ ಗಮನ ಬೇರೆಡೆ ಸೆಳೆಯಲು ಚಂದ್ರಯಾನದ ನಾಟಕ ಆಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

Advertisement

ಪ.ಬಂಗಾಲ ವಿಧಾನಸಭೆಯಲ್ಲಿ ಮಾತನಾಡಿದ ಅವರು ಚಂದ್ರಯಾನ-2 ಬಗ್ಗೆ ಬಿಜೆಪಿಯನ್ನು ಟೀಕಿಸಿದರು. ಚಂದ್ರಯಾನ-2 ಇದೇ ಮೊದಲನೆಯದೇ? ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಇಂತಹ ಯಾವುದೇ ಯೋಜನೆಗಳು ಆಗಲಿಲ್ಲವೇ ಎಂದು ಟೀಕಿಸಿದರು. ದೇಶದ ಆರ್ಥಿಕತೆ ಕುಸಿಯುತ್ತಿರುವ ವೇಳೆ ಇದೆಲ್ಲ ಮಾಡಿ ಗಮನ ಬೇರೆಡೆಗೆ ಸೆಳೆಯಲಾಗುತ್ತಿದೆ ಎಂದರು.

ಅಲ್ಲದೇ ಎನ್‌ಆರ್‌ಸಿಯನ್ನು ಯಾವುದೇ ಕಾರಣಕ್ಕೂ ಪ.ಬಂಗಾಲದಲ್ಲಿ ಜಾರಿಗೆ ತರುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next