Advertisement

ಸ್ಟಾಲಿನ್‌ ಭೇಟಿಗೆ ಕೆಸಿಆರ್‌ ಮತ್ತೊಮ್ಮೆ ಯತ್ನ

10:05 AM May 13, 2019 | Team Udayavani |

ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪ್ರಯತ್ನಿಸುತ್ತಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ರನ್ನು ಭೇಟಿ ಮಾಡಲು ಮತ್ತೂಂದು ಪ್ರಯತ್ನ ನಡೆಸಿದ್ದಾರೆ.

Advertisement

ಕಳೆದ ವಾರ ಭೇಟಿಗೆ ಯತ್ನಿಸಿದ್ದರಾದರೂ, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನೆಪ ಹೇಳಿ ಸ್ಟಾಲಿನ್‌ ತಪ್ಪಿಸಿಕೊಂಡಿದ್ದರು. ಆದರೆ ಸೋಮ ವಾರ ಸ್ಟಾಲಿನ್‌ರನ್ನು ಭೇಟಿ ಮಾಡಲು ಕೆಸಿಆರ್‌ ಬಯಸಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ತಮಿಳುನಾಡಿಗೆ ಕೆಸಿಆರ್‌ ಕುಟುಂಬ ಸಮೇತ ಭೇಟಿ ನೀಡಲಿದ್ದು, ಸ್ಟಾಲಿನ್‌ ಜತೆ ಮಾತುಕತೆ ನಡೆಸಿದ ಅನಂತರ ಅವರು ಶ್ರೀರಂಗಮ್‌, ತಿರುಚ್ಚಿಯಲ್ಲಿನ ದೇಗುಲಗಳಿಗೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next