Advertisement

ಏ.21ಕ್ಕೆ ‘ಚಾಂದಿನಿ ಬಾರ್‌’ಬಿಡುಗಡೆ

02:43 PM Apr 16, 2023 | Team Udayavani |

“ಚಾಂದಿನಿ ಬಾರ್‌’ ಹೀಗೊಂದು ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಏ.21ಕ್ಕೆ ತೆರೆ ಕಾಣುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ರಾಘವೇಂದ್ರ ಕುಮಾರ್‌, ಈ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

Advertisement

“ಚಾಂದಿನಿ ಬಾರ್‌’ ಚಿತ್ರದಲ್ಲಿ ರಾಘವೇಂದ್ರ ಕುಮಾರ್‌ಗೆ ಸುಕೃತಿ ಪ್ರಭಾಕರ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಸಿದ್ದು ಬದನವಾಳು, ಮಣಿಕಂಠ, ರಶ್ಮಿ, ಮಂಜು ಆರ್ಯ, ವಿಜಯ ಕಾರ್ತಿಕ್‌, ಸಂಪತ್‌ ಮೈತ್ರೇಯಾ, ಸೂರ್ಯ ಶೇಖರ್‌, ಶ್ರೀವತ್ಸ, ರವಿಕುಮಾರ್‌, ಭರತ ಕುಮಾರ್‌ ಬಿ. ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಚಾಂದಿನಿ ಬಾರ್‌’ ಚಿತ್ರದ ಟೈಟಲ್‌ ಮತ್ತು ಕಥಾಹಂದರದ ಬಗ್ಗೆ ಮಾತನಾಡುವ ನಾಯಕ ನಟ ಕಂ ನಿರ್ದೇಶಕ ರಾಘವೇಂದ್ರ ಕುಮಾರ್‌, “ಬಾರ್‌ ಒಂದರಲ್ಲಿ ಸೇರುವ ಒಂದಷ್ಟು ಬೇರೆ ಬೇರೆ ಹಿನ್ನೆಲೆಯ ವ್ಯಕ್ತಿಗಳ ಜೀವನ ಹೇಗೆಲ್ಲ ಟ್ರಾವೆಲ್‌ ಆಗುತ್ತದೆ ಅನ್ನೋದು “ಚಾಂದಿನಿ ಬಾರ್‌’ ಸಿನಿಮಾದ ಕಥೆಯ ಒಂದು ಎಳೆ. ಬಾರ್‌ ಒಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಯನ್ನು ಹೇಳಲಾಗಿದೆ. ಇಲ್ಲಿ ಲವ್‌, ಸೆಂಟಿಮೆಂಟ್‌, ಎಮೋಶನ್ಸ್‌, ಕಾಮಿಡಿ ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳಿವೆ. ಆದಷ್ಟು ನೈಜವಾಗಿ ಸಿನಿಮಾ ಮೂಡಿಬಂದಿರುವುದರಿಂದ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

ಬಹುತೇಕ ರಂಗಭೂಮಿ ಹಿನ್ನೆಲೆಯ ಕಲಾವಿದರು ಮತ್ತು ತಂತ್ರಜ್ಞರೇ ಸೇರಿ ನಿರ್ಮಿಸುತ್ತಿರುವ “ಚಾಂದಿನಿ ಬಾರ್‌’ ಚಿತ್ರದ ಚಿತ್ರೀಕರಣವನ್ನು ಮೈಸೂರು ಸುತ್ತಮುತ್ತ ನಡೆಸಲಾಗಿದೆ.

“ಕ್ಯಾಮರಾ ಮೂವೀಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗಿ “ಚಾಂದಿನಿ ಬಾರ್‌’ ಚಿತ್ರಕ್ಕೆ ಚೇತನ ಶರ್ಮ ಎ ಛಾಯಾಗ್ರಹಣ, ಬಿ. ಎಸ್‌ ಕೆಂಪರಾಜ್‌ ಸಂಕಲನ, ಪ್ರಶಾಂತ್‌ ಹೆಬೂರ್‌ ಕಲಾ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ವಿಶಾಖ್‌ ನಾಗಲಾಪುರ, ಕಾರ್ತಿಕ್‌ ನಾಗಲಾಪುರ ಸಾಹಿತ್ಯ ಮತ್ತು ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಶಂಕರ್‌ ಸ್ಪೆಷಲ್‌ ಎಫೆಕ್ಟ್ಸ್, ರಿತ್ವಿಕ್‌ ಮುರಳೀಧರ ಹಿನ್ನೆಲೆ ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next