Advertisement

Chandigarh: ಮುಸ್ಲಿಮರು ಊರು ತೊರೆಯಲು ಬೆದರಿಕೆ; ಆಸೀಫ್ ಎಂಬಾತನಿಗೆ ಹುಡುಕಾಟ

11:47 PM Aug 28, 2023 | Team Udayavani |

ಚಂಡೀಗಢ: “ಸೋಮವಾರದೊಳಗೆ ನಗರದ ಎಲ್ಲ ಮುಸಲ್ಮಾನರು ಊರು ತೊರೆಯಬೇಕು, ಇಲ್ಲದಿದ್ದರೆ ನಿಮ್ಮ ಸಾವುಗಳಿಗೆ ನೀವೆ ಹೊಣೆಯಾಗುತ್ತೀರಿ!’ ಹೀಗೊಂದು ಬೆದರಿಕೆ ಸಂದೇಶವಿರುವ ಪತ್ರಗಳನ್ನು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದ ಹೆಸರಲ್ಲಿ ಹರಿಯಾಣದ ಗುರುಗ್ರಾಮದ ಕೊಳಗೇರಿಯಲ್ಲಿ ಅಂಟಿಸಿರುವುದು ಪತ್ತೆಯಾಗಿದೆ.

Advertisement

ಇತ್ತೀಚೆಗಷ್ಟೇ ಹರಿಯಾಣದ ನೂಹ್‌ನಲ್ಲಿ ಕೋಮುಸಂಘರ್ಷ ಏರ್ಪಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಿಂದೂ ಸಂಘಟನೆಗಳ ಹೆಸರಲ್ಲಿ ಈ ಸುಳ್ಳು ಬೆದರಿಕೆ ಪತ್ರಗಳನ್ನು ಆಸೀಫ್ ಎಂಬವನೇ ಅಂಟಿಸಿದ್ದಾನೆಂಬ ಶಂಕೆ ವ್ಯಕ್ತವಾಗಿದ್ದು, ಆತನಿಗಾಗಿ ಶೋಧ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next