Advertisement

ಬೂಸ್ಟರ್‌ ಡೋಸ್‌ ಪಡೆದವರಿಗೆ “ಛೋಲೆ ಬತೂರ’ಉಚಿತ!

12:00 AM Aug 01, 2022 | Team Udayavani |

ಚಂಡೀಗಡ: ಕಳೆದ ವರ್ಷ, ಎರಡನೇ ಡೋಸ್‌ ಕೊರೊನಾ ಲಸಿಕೆ ಪಡೆದವರಿಗೆ ಉಚಿತವಾಗಿ “ಛೋಲೆ ಬತೂರ’ (ಉತ್ತರ ಭಾರತದ ತಿನಿಸು) ನೀಡಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಚಂಡೀಗಡದ ಬೀದಿಬದಿ ತಿನಿಸು ವ್ಯಾಪಾರಿ ಸಂಜಯ್‌ ರಾಣಾ, ಈಗ ತನ್ನ ಗ್ರಾಹಕರಿಗೆ ಮತ್ತೊಂದು ಸಮಾಜಮುಖಿ ಆಫ‌ರ್‌ ನೀಡಿದ್ದಾರೆ.

Advertisement

ಕೊರೊನಾದ ಬೂಸ್ಟರ್‌ ಡೋಸ್‌ ಹಾಕಿಸಿಕೊಂಡವರಿಗೆ ಉಚಿತ “ಛೋಲೆ ಬತೂರ’ ನೀಡುವುದಾಗಿ ಅವರು ಘೋಷಿಸಿದ್ದಾರೆ. ಕೆಲವು ತಿಂಗಳುಗಳಿಂದಲೂ ಕೇಂದ್ರ ಸರ್ಕಾರ ಕೊರೊನಾ ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ. ಆದರೆ, ಬೂಸ್ಟರ್‌ ಡೋಸ್‌ಗೆ ಹೆಚ್ಚಿನ ಜನರು ಒಲವು ತೋರುತ್ತಿಲ್ಲ. ಅದನ್ನು ಗಮನಿಸಿರುವ ರಾಣಾ, ತಮ್ಮ ಆಫ‌ರ್‌ ಮೂಲಕ ಜನರನ್ನು ಬೂಸ್ಟರ್‌ ಡೋಸ್‌ ಕಡೆಗೆ ಸೆಳೆಯುವಂತೆ ಮಾಡಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next