Advertisement

Chandigarh:ಗೋಮಾಂಸ ಸೇವನೆ ಶಂಕೆ: ವ್ಯಾಪಾರಿ ಹತ್ಯೆ, 7 ಮಂದಿ ಸೆರೆ

12:59 AM Sep 01, 2024 | Team Udayavani |

ಚಂಡೀಗಢ: ದನದ ಮಾಂಸ ಸೇವಿಸಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಮತ್ತು ಅಸ್ಸಾಂನ ವ್ಯಕ್ತಿಗಳಿಗೆ ಹರಿಯಾಣದ ಚರಖೀ ದಾದರಿ ಜಿಲ್ಲೆಯಲ್ಲಿ ಥಳಿಸಲಾಗಿದೆ. ಆ.27ರಂದು ಈ ಘಟನೆ ನಡೆದಿತ್ತು. ಥಳಿಸುವ ವೇಳೆ ಜನರು ಆಕ್ಷೇಪಿಸಿದ್ದರಿಂದ ಮತ್ತೂಂದು ಸ್ಥಳಕ್ಕೆ ಕರೆದೊಯ್ದು ಥಳಿಸಲಾ­ಗಿದೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಲದ ವ್ಯಕ್ತಿ ಅಸುನೀಗಿ­ದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಾಪರಾ­ಧಿಗಳು ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next