Advertisement

ಚಾಮರಾಜನಗರ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ; 15ಲಕ್ಷ ಮೌಲ್ಯದ ಗಾಂಜಾ ವಶ

07:35 PM Oct 20, 2020 | mahesh |

ಹನೂರು: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ 15ಲಕ್ಷ ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳುವಲ್ಲಿ ರಾಮಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ತಾಲೂಕಿನ ಎಂ.ಜಿ.ದೊಡ್ಡಿ ಗ್ರಾಮದ ಮಣಿಕಂಠ(29) ಅಲಿಯಾಸ್ ಗುಂಡ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿರುವುದಾಗಿ ರಾಮಾಪುರ ಪೊಲೀಸರಿಗೆ ಮಾಹಿತಿ ದೊರೆತಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಪಿಐ ಮನೋಜ್‍ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಸಿಪಿಐ ಮನೋಜ್‍ಕುಮಾರ್, ಪಿಎಸ್‍ಐ ಮಂಜುನಾಥ್ ಪ್ರಸಾದ್, ಕೌದಳ್ಳಿ ವಮಯ ಅರಣ್ಯಾಧಿಕಾರಿ ವಿನಯ್‍ಕುಮಾರ್, ರಾಮಾಪುರ ವೈದ್ಯಾಧಿಕಾರಿ ಡಾ||ಮನು, ಗ್ರಾಮ ಲೆಕ್ಕಾಧಿಕಾರಿ ದಿನೇಶ್, ಅರಣ್ಯ ರಕ್ಷಕರಾದ ಗಿರೀಶ್, ಮಲ್ಲಿಕಾರ್ಜುನ ಹಂಗರಗಿ, ಸುರೇಶ್, ನೀಲಶೆಟ್ಟಿ, ಪೊಲೀಸ್ ಸಿಬ್ಬಂದಿಗಳಾದ ನಂಜುಂಡ, ಮಾದೇಶ್. ರಘು, ಮನೋಹರ್, ಶೀವಮೂರ್ತಿ, ಸುರೇಶ್, ನಾಗಶೆಟ್ಟಿ, ರಂಗಸ್ವಾಮಿ, ಪರಮೇಶ್, ರವಿಪ್ರಸಾದ್ ಇನ್ನಿತರರು ಭಾಗವಹಿಸಿದ್ದರು.

ಎಸ್ಪಿ ಅವರಿಂದ ನಗುದು ಬಹುಮಾನ ಘೋಷಣೆ: ರಾಮಾಪುರ ಪೊಲೀಸರ ಈ ದಾಳಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ 15 ಸಾವಿರ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next